
ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವ ಅಗತ್ಯವಿಲ್ಲ. ಮುಸ್ಲಿಂ ಸಮಾಜದಲ್ಲೇ ಸಾಕಷ್ಟು ಯುವತಿಯರು, ರೂಪವತಿಯರು, ವಿದ್ಯಾವಂತರು, ಅನಾಥರು, ಬಡವರು, ನಿರ್ಗತಿಕರು ಇದ್ದಾರೆ.ಅಂತವರನ್ನು ಮದುವೆಯಾದರೆ ಪುಣ್ಯವಾದರೂ ಬರುತ್ತದೆ. ಮುಸ್ಲಿಮರು ಇತರ ಧರ್ಮದವರೊಂದಿಗೆ
ಸೌಹಾರ್ದತೆಯಿಂದ ಅನ್ನೋನ್ಯವಾಗಿ ಇರಬೇಕು. ಅವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು



ಎಂದು ಮುಸ್ಲಿಂ ಯುವಜನ ಪರಿಷತ್ ಅಧಕ್ಷ ಟಿ.ಎಂ.ಶಹೀದ್ ತಮ್ಮ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದ ಪ್ರಶ್ನೆಗೆ ಉತ್ತರಿಸಿ ಅವರು ಈ ಮಾತನ್ನು ಹೇಳಿದ್ದಾರೆ,
ಸುಳ್ಯ ನಗರದ ಅಲ್ಲಲ್ಲಿ ಕೆಲವು ಸಂಘಟನೆಗಳು ಅಳವಡಿಸಿದ ಕೆಲವು ಬ್ಯಾನರ್ ತೆರವು ಮಾಡಬೇಕು, ಲವ್ ಜಿಹಾದ್ ಎಂದೂ, ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದೂ ಫಲಕ
ಹಾಕಿರುವುದು ಕೋಮು ಸೌಹಾರ್ದವನ್ನು ಕೆಡಿಸುವ
ಹುನ್ನಾರವಾಗಿದೆ ಎಂದು ಟಿ.ಎಂ.ಶಹೀದ್ ಹೇಳಿದ್ದಾರೆ ಎಂದು ಸುಳ್ಯದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ರೀತಿಯ ಬೋರ್ಡ್ಗಳನ್ನು ಹಾಕಲು ಆಡಳಿತ ಅವಕಾಶ ನೀಡಬಾರದು. ಈಗ ಹಾಕಿರುವುದನ್ನು ತೆಗೆಸಲು ಈಗಾಗಲೆ ಸುಳ್ಯ ತಹಶೀಲ್ಧಾರ್ ಗೆ ಮನವಿ ನೀಡಿದ್ದೇವೆ.ಮಸೀದಿಗಳ ಉರೂಸ್, ಮತ್ತು ಇನ್ನಿತರ ಜಾತ್ರೆಗಳಲ್ಲಿಎಲ್ಲಾ ಧರ್ಮದವರೂ ವ್ಯಾಪಾರ ನಡೆಸುತ್ತಾರೆ. ನಾವು ಯಾರನ್ನು ತಡೆದಿಲ್ಲ ಏಕೆಂದರೆ ಯಾರೂ ದೇವಳದ ಒಳಗಾಗಲೀ, ಮಸೀದಿಯ ಒಳಗಾಗಲಿ ಹೋಗಿ ವ್ಯಾಪಾರ ಮಾಡುವುದಿಲ್ಲ. ಬೀದಿಯಲ್ಲಿ ಮಾಡುವುದು.ಅದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡಿದರು.

ಲವ್ ಜಿಹಾದ್ ಎಂಬ ಶಬ್ದವೇ ಅರ್ಥವಿಲ್ಲದ್ದು. ಬಿಜೆಪಿಯ ಬಹುಪಾಲು ವ್ಯಕ್ತಿಗಳು ತಮ್ಮ ಮಕ್ಕಳ ವಿವಾಹವನ್ನು ಮುಸ್ಲಿಮರೊಂದಿಗೆ ಮಾಡಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿ ಮುಸಲ್ಮಾನರನ್ನು
ಪ್ರತ್ಯೇಕಿಸಿ ಅವರನ್ನು ಕೆಟ್ಟವರನ್ನಾಗಿ ಚಿತ್ರಿಸುವ
ಪ್ರಯತ್ನವನ್ನು ಮಾಡಲಾಗುತ್ತಿದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಇಂತಹ ಕೃತ್ಯಕ್ಕೆ ಬೆಂಬಲ ನೀಡುತ್ತಿವೆ. ತಹಶೀಲ್ಧಾರ್ ಮತ್ತು ಪೋಲಿಸ್ ಇಲಾಖೆ ಅವರ ಕಪಿಮುಷ್ಟಿಯಲ್ಲಿದ್ದಾರೆ, ಇನ್ನು ಕೆಲವು ಅಧಿಕಾರಿಗಳಿದ್ದಾರೆ ಮಸಲ್ಮಾನರನ್ನು ತುಳಿಯುತ್ತಿದ್ದಾರೆ ಎಂದು ಹೇಳಿದರು, ಸಿದ್ದಿಕ್ ಕೊಕ್ಕೊ, ಹಮೀದ್ ಬೀಜಕೊಚ್ಚಿ, ಮಸೂದ್ ಮೊದಲಾದವರು ಜೊತೆಯಲ್ಲಿದ್ದರು..
