
ಸುಳ್ಯ ನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ನಗರ ಪಂಚಾಯತ್ ಆವರಣದಲ್ಲಿರುವ ಕಸದ ರಾಶಿ ಕಂಡು ಕ್ರೋಧಗೊಂಡ ಘಟನೆ ಇಂದು ನಡೆದಿದೆ ಅನಿರೀಕ್ಷಿತ ವಾಗಿ ಸುಳ್ಯ ಬೇಟಿ ಮಾಡಿದ್ದ ಜಿಲ್ಲಾಧಿಕಾರಿ ತಾಲೊಕು ಕಚೇರಿಗೆ ಅಲ್ಲಿಯ ಕೆಲಸಗಳನ್ನು ಪರಿಶೀಲಿಸಿ ನೇರ ನಗರ ಪಂಚಾಯತ್ ಬೇಟಿ ಮಾಡಿದರು, ನಗರ ಪಂಚಾಯತ್ ಎದುರು ಭಾಗದಲ್ಲಿ ಕಸದ ರಾಶೀ ಹಾಗೇ ಇದ್ದುದನ್ನು ಕಂಡ ಜಿಲ್ಲಾಧಿಕಾರಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇಷ್ಟೊಂದು ಸಮಸ್ಯೆ ಇದ್ದರೂ ಇದರ ಬಗ್ಗೆ ಯಾವದೇ ತುರ್ತುಕ್ರಮ ಜರುಗಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು, ಶೇಕಡಾ 75% ಒಣ ಕಸ ಹಾಗೂ ಶೇ 25% ಹಸಿಕಸ ಇದ್ದು ಇಲ್ಲಿ ಕಸದಿಂದಾಗಿ ಸ್ಥಳಿಯರಿಗೆ ಸೊಳ್ಳೆ ಉತ್ಪಾದನಾ ಕೇಂದ್ರವಾಗುವಂತೆ ಮಾಡಿದ್ದೀರಿ ಇಲ್ಲಿಂದ ಹರಿಯುವ ನೀರು ಚರಂಡಿ ಮೂಲಕ ಪಯಸ್ವಿನಿ ನದಿ ನೀರು ಸೇರುವಂತೆ ಮಾಡುತ್ತಿದ್ದೀರಿ , ಇದು ಯಾಕೆ ವಿಳಂಬವಾಯಿತು ಇದಕ್ಕಿರುವ ತೊಡಕಾದ್ರು ಏನು ..ಹೊಸದಾಗಿ ಎಲ್ಲಾ ಧಾಖಲೆ ಸಿದ್ದಪಡಿಸಿ ಕೂಡಲೇ ಕ್ರಮ ಗೈ ಗೊಂಡು ಕಸದ ಸಮಸ್ಯೆ ಮುಕ್ತಿ ನೀಡುವಂತೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ, ತಾ. ಪಂ ಕಾರ್ಯ ನಿರ್ವಹಣಾಧಿಕಾರಿ ಭವಾನಿಶಂಕರ, ನಗರ ಪಂಚಾಯತ್ ಸದಸ್ಯರುಗಳಿದ್ದರು.



