
ಸುಳ್ಯದಲ್ಲಿ ಮೂರು ದಿನಗಳ ಕೃಷಿ ಮೇಳವನ್ನು ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪೆನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಸಹಕಾರಿ ಯೂನಿಯನ್, ಸುದ್ದಿ ಮಾಧ್ಯಮ ಸಂಸ್ಥೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದು ಡಿ.16.ರಂದು ತಾರಾಲಯದ ಉದ್ಘಾಟನೆಯನ್ನು ಮತ್ತು ಕೃಷಿ ಮಳಿಗೆಯನ್ನು ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಉದ್ಘಾಟಿಸಿದರು ನಂತರ ಮಾತನಾಡಿದ ಸಚಿವ ಎಸ್ ಅಂಗಾರ, ಕೃಷಿ ಮೇಳದ ಮೂಲಕ ನಮ್ಮ ಮೂಲ ಪರಂಪರೆ ಮತ್ತು ಹಿರಿಯರ ಜೀವನ ಶೈಲಿ ಮತ್ತು ಬದುಕುವ ಕಲೆ ಎಲ್ಲವನ್ನು ತಿಳಿದುಕೊಳ್ಳಲು ಅವಕಾಶ ಇದೀಗ ಸುಳ್ಯ ಜನತೆಗೆ ಲಭ್ಯವಾಗಿದೆ, ಇಂದಿನ ಮಕ್ಕಳಿಗೆ ಈ



ಕೃಷಿಮೇಳದಿಂದ ಬಹಳಷ್ಟು ವಿಷಯ ತಿಳಿದು ಕೊಳ್ಳಲು ಅವಕಾಶವಿದೆ- ಎಂದು ಹೇಳಿದರು, ಕಾರ್ಯಕ್ರಮದ ಅದ್ಯಕ್ಷತೆಯನ್ನು ನಗರ ಪಂಚಾಯತ್ ಅದ್ಯಕ್ಷ ವಿನಯ್ ಕುಮಾರ್ ಕಂದಡ್ಕ ವಹಿಸಿದ್ದರು, ಕಾರ್ಯಕ್ರಮದಲ್ಲಿ ಗೂ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ಮಾಣಿಲ ಮೊಹನದಾಸ್ ಸ್ವಾಮೀಜಿ ,ಕೃಷಿ ಈ ದೇಶದ ಪರಂಪರೆ ಸಂಸ್ಕೃತಿ ಈ ದೇಶದ ಮಣ್ಣಿನ ಸಾರವನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆ. ನಮ್ಮ ಆಹಾರ ಪದ್ದತಿಯನ್ನು ಅನುಸರಿಸಿಕೊಂಡು ಹೋಗುವ ಅವಶ್ಯಕತೆ ಇದೆ. ಗೊ ಸಂಪನ್ಮೂಲ ಅಬಿವೃದ್ದಿ ಪಡಿಸಿ ಇದರ ಗೊಬ್ಬರಗಳಿಂದ ಸಾವಯವ ಕೃಷಿ ಸಂಪನ್ಮೂಲ ಬೆಳಸಿ ಬೆಳಗಿಸುವ ಅವಶ್ಯಕತೆ ಇಂದಿನ ಕಾಲ ಘಟ್ಟದಲ್ಲಿ ಇದೆ, ಕೃಷಿ ಮೇಳದ ಮೂಲಕ ಮಾನವೀಯ ಮೌಲ್ಯ ಉದ್ದೀಪನಕ್ಕೆ ಕಾರಣವಾಗಬಹುದು ಎಂದು

ಹೇಳಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಕೃಷಿ ಸಾಧಕ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು , ಪ್ರಣವ ಸೌಹಾರ್ದ ಸಹಕಾರಿ ಸಂಘದ ಅದ್ಯಕ್ಷ ಪ್ರಸಾಧ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವೇದಿಕೆಯಲ್ಲಿ, ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ಸಂತೋಷ್ ಜಾಕೆ,ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್ , ಸಂತೋಷ್ ಕುತ್ತಮೊಟ್ಟೆ, ಎನ್ ಎ ಜ್ಞಾನೇಶ, ಮೀನುಗಾರಿಕ ನಿಗಮ ಅಧ್ಯಕ್ಷ ಎ.ವಿ ತೀರ್ಥರಾಮ, ಮೊದಲಾದವರಿದ್ದರು ತಾಲೋಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್ ಭವಾನಿಶಂಕರ್ ಸ್ವಾಗತಿಸಿ, ಪಿ.ಎಂ ರಂಗನಾಥ್ ವಂದಿಸಿದರು
