
ಸುಳ್ಯ: ಪ್ರತಿಷ್ಠಿತ ಗಾಂಧಿ ಗ್ರಾಮ
ಪುರಸ್ಕಾರ ಪಡೆದಿರುವ ಸಂಪಾಜೆ ಗ್ರಾಮ
ಪಂಚಾಯತ್ ಮತ್ತೊಂದು ಕೀರ್ತಿ ಗರಿಯನ್ನು
ಮುಡಿಗೇರಿಸಿಕೊಂಡಿದೆ. ೨೦೨೧-೨೨ನೇ ಸಾಲಿನ ಡಾ
ಶಿವರಾಮ ಕಾರಂತ ಪ್ರಶಸ್ತಿಯನ್ನು ಶನಿವಾರ
ಕೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದೆ.
ಕೋಟಾ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ಪರವಾಗಿ ಸಂಪಾಜೆ ಗ್ರಾಮ ಅಧ್ಯಕ್ಷ ಜಿ ಕೆ ಹಮೀದ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಮಟ್ಟಾರು ರತ್ನಾಕರ ಹೆಗ್ಡೆ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ. ಶಾಸಕರಾದ ಲಾಲಾಜಿ ಮೆಂಡನ್, ಮೊದಲಾದವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ರಜನಿ ಶರತ್, ವಿಜಯಕುಮಾರ್, ಅನುಪಮಾ. ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ, ಸಿಬ್ಬಂದಿಗಳಾದ ಸವಿತಾ ಕಿಶೋರ್, ಉಮೇಶ್, ಹರ್ಷಿತ್ ಉಪಸ್ಥಿತರಿದ್ದರು.




