
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಆಪ್ ಪಕ್ಷದ ಕಾರ್ಯಕರ್ತರು ಮಿಂಚಿನ ಸಂಚಾರ ಮಾಡುತ್ತಿದ್ದು, ಕಳೆದ ರಾತ್ರಿ ಪಾಲ್ತಾಡು ಸಮೀಪ ಚೆನ್ನಾರು ಎಂಬಲ್ಲಿ ಸುಮಾರು 40 ಕ್ಕೂ ಅಧಿಕ ಮಂದಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ ಯಾಗಿದ್ದಾರೆ ಎಂದು ತಿಳಿದು ಬಂದಿದೆ. ಶಾಫಿ ಎಂಬವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಆಮ್ ಆದ್ಮಿ ಪಾರ್ಟಿ ಮುಖಂಡ ಖಲಂದರ್ ಎಲಿಮಲೆ ನೇತೃತ್ವದಲ್ಲಿ ಅಶ್ರಫ್ ಎಂ.ಆರ್., ಸಂಶುದ್ದೀನ್, ಮನ್ಸೂರ್, ಸತ್ತಾರ್ ಮತ್ತಿತರರು ಆಪ್ ಪ್ರಮುಖರು ಮಾತುಕತೆ ನಡೆಸಿ 40 ಕ್ಕೂ ಹೆಚ್ಚು ಯುವಕರನ್ನು ಪಕ್ಷಕ್ಕೆ ಸೇರ್ಪಡೆಯಾದರುಎಂದು ಆಮ್ ಆದ್ಮಿ ಪಕ್ಷದ ಪ್ರಮುಖರು ತಿಳಿಸಿದ್ದಾರೆ

