ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಕಟ – ಕಲಾವಿದರು, ಸಾಹಿತ್ಯಕಾರರು, ಸಮಾಜಸೇವಕರು ಸೇರಿ 70 ಮಂದಿ ಸಾಧಕರಿಗೆ ಈ ಬಾರಿಯ ಗೌರವ

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಕಟ – ಕಲಾವಿದರು, ಸಾಹಿತ್ಯಕಾರರು, ಸಮಾಜಸೇವಕರು ಸೇರಿ 70 ಮಂದಿ ಸಾಧಕರಿಗೆ ಈ ಬಾರಿಯ ಗೌರವ

ಕರ್ನಾಟಕ ಸರ್ಕಾರವು 2025–26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಈ ಬಾರಿ ಪ್ರಶಸ್ತಿಗೆ ಒಟ್ಟು 70 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಯಾವುದೇ ಅರ್ಜಿ ಆಹ್ವಾನಿಸದೇ ಪ್ರಶಸ್ತಿಗಾರರ ಆಯ್ಕೆ ಮಾಡಲಾಗಿದೆ. ಜಿಲ್ಲಾವಾರು, ಸಾಮಾಜಿಕ ಪರಿಪಾಲನೆ ಹಾಗೂ ಆಯ್ಕೆ ಸಲಹಾ ಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಪ್ರಶಸ್ತಿದಾರರನ್ನು ಗುರುತಿಸಲಾಗಿದೆ.

ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದಂತೆ —

“ಆಯ್ಕೆ ಸಮಿತಿಯ ಸದಸ್ಯರು ಹಲವು ಬಾರಿ ಸಭೆ ನಡೆಸಿ, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಮೌಲಿಕ ಕೊಡುಗೆ ನೀಡಿದ ಸಾಧಕರನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿ ಯಾವುದೇ ಸಂಘ–ಸಂಸ್ಥೆಗಳಿಗೆ ಪ್ರಶಸ್ತಿ ನೀಡದ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ 12 ಮಂದಿ ಮಹಿಳೆಯರೂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.”

ಈ ಬಾರಿ ಸಮಗಾರ ಹರಳಯ್ಯ ಸಮುದಾಯದ ಇಬ್ಬರು ಪ್ರತಿಭೆಗಳು ಪ್ರಶಸ್ತಿಗೆ ಪಾತ್ರರಾಗಿರುವುದು ಇತಿಹಾಸದಲ್ಲೇ ಮೊದಲ ಘಟನೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 1ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಪ್ರಶಸ್ತಿಯಲ್ಲಿ ₹5 ಲಕ್ಷ ನಗದು, 25 ಗ್ರಾಂ ಚಿನ್ನದ ಪದಕ ಹಾಗೂ ಫಲಕ ಒಳಗೊಂಡಿದೆ.

🏅 ಪ್ರಮುಖ ವಿಭಾಗವಾರು ಪ್ರಶಸ್ತಿ ಪಟ್ಟಿ

📚 ಸಾಹಿತ್ಯ ಕ್ಷೇತ್ರ

ಪ್ರೊ. ರಾಜೇಂದ್ರ ಚೆನ್ನಿ – ಶಿವಮೊಗ್ಗ

ತುಂಬಾಡಿ ರಾಮಯ್ಯ – ತುಮಕೂರು

ಪ್ರೊ. ಅರ್. ಸುನಂದಮ್ಮ – ಚಿಕ್ಕಬಳ್ಳಾಪುರ

ಡಾ. ಎಚ್.ಎಲ್. ಪುಷ್ಪ – ತುಮಕೂರು

ರಹಮತ್ ತರೀಕೆರೆ – ಚಿಕ್ಕಮಗಳೂರು

ಹ.ಮ. ಪೂಜಾರ – ವಿಜಯಪುರ

🎭 ಜಾನಪದ ಕ್ಷೇತ್ರ

ಬಸಪ್ಪ ಭರಮಪ್ಪ ಚೌಡ್ಕಿ – ಕೊಪ್ಪಳ

ಬಿ. ಟಾಕಪ್ಪ ಕಣ್ಣೂರು – ಶಿವಮೊಗ್ಗ

ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ – ಬೆಳಗಾವಿ

ಹನುಮಂತಪ್ಪ, ಮಾರಪ್ಪ, ಚೀಳಂಗಿ – ಚಿತ್ರದುರ್ಗ

ಎಂ. ತೋಪಣ್ಣ – ಕೋಲಾರ

ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ

ಮತಿ ಸಿಂಧು ಗುಜರನ್ – ದಕ್ಷಿಣ ಕನ್ನಡ

ಎಲ್. ಮಹದೇವಪ್ಪ ಉಡಿಗಾಲ – ಮೈಸೂರು

🎶 ಸಂಗೀತ / ನೃತ್ಯ

ದೇವೇಂದ್ರಕುಮಾರ ಪತ್ತಾರ್ – ಕೊಪ್ಪಳ

ಮಡಿವಾಳಯ್ಯ ಸಾಲಿ – ಬೀದರ್

ಪ್ರೊ. ಕೆ. ರಾಮಮೂರ್ತಿ ರಾವ್ – ಮೈಸೂರು

🎬 ಚಲನಚಿತ್ರ / ಕಿರುತೆರೆ

ಪ್ರಕಾಶ್ ರಾಜ್ – ದಕ್ಷಿಣ ಕನ್ನಡ

ಮತಿ ವಿಜಯಲಕ್ಷ್ಮೀ ಸಿಂಗ್ – ಕೊಡಗು

🏥 ಆಡಳಿತ / ವೈದ್ಯಕೀಯ

ಹೆಚ್. ಸಿದ್ದಯ್ಯ (ಭಾ.ಆ.ಸೇ–ನಿ) – ಬೆಂಗಳೂರು ದಕ್ಷಿಣ

ಡಾ. ಆಲಮ್ಮ ಮಾರಣ್ಣ – ತುಮಕೂರು

ಡಾ. ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ

🔸 ಸಮಾಜ ಸೇವೆ

ಮತಿ ಸೂಲಗಿತ್ತಿ ಈರಮ್ಮ – ವಿಜಯನಗರ

ಮತಿ ಫಕ್ಕೀರಿ – ಬೆಂಗಳೂರು ಗ್ರಾಮಾಂತರ

ಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ – ದಕ್ಷಿಣ ಕನ್ನಡ

ಡಾ. ಎನ್. ಸೀತಾರಾಮ ಶೆಟ್ಟಿ – ಉಡುಪಿ

ಕೋಣಂದೂರು ಲಿಂಗಪ್ಪ – ಶಿವಮೊಗ್ಗ

ಉಮೇಶ ಪಂಬದ – ದಕ್ಷಿಣ ಕನ್ನಡ

ಡಾ. ರವೀಂದ್ರ ಕೋರಿಶೆಟ್ಟಿರ್ – ಧಾರವಾಡ

ಕೆ. ದಿನೇಶ್ – ಬೆಂಗಳೂರು

ಶಾಂತರಾಜು – ತುಮಕೂರು

ಜಾಫರ್ ಮೊಹಿಯುದ್ದೀನ್ – ರಾಯಚೂರು

ಪೆನ್ನ ಓಬಳಯ್ಯ – ಬೆಂಗಳೂರು ಗ್ರಾಮಾಂತರ

ಶಾಂತಿ ಬಾಯಿ – ಬಳ್ಳಾರಿ

ಪುಂಡಲೀಕ ಶಾಸ್ತ್ರೀ (ಬುಡಬುಡಕೆ) – ಬೆಳಗಾವಿ

🌍 ಹೊರನಾಡು / ಹೊರದೇಶ

ಜಕರಿಯ ಬಜಪೆ – ಸೌದಿ ಅರೇಬಿಯಾ

ಪಿ.ವಿ. ಶೆಟ್ಟಿ – ಮುಂಬೈ

🌿 ಪರಿಸರ

ರಾಮೇಗೌಡ – ಚಾಮರಾಜನಗರ

ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ

🌾 ಕೃಷಿ

ಡಾ. ಎಸ್.ವಿ. ಹಿತ್ತಲಮನಿ – ಹಾವೇರಿ

ಎಂ.ಸಿ. ರಂಗಸ್ವಾಮಿ – ಹಾಸನ

📰 ಮಾಧ್ಯಮ

ಕೆ. ಸುಬ್ರಮಣ್ಯ – ಬೆಂಗಳೂರು

ಅಂಶಿ ಪ್ರಸನ್ನಕುಮಾರ್ – ಮೈಸೂರು

ಬಿ.ಎಂ. ಹನೀಫ್ – ದಕ್ಷಿಣ ಕನ್ನಡ

ಎಂ. ಸಿದ್ಧರಾಜು – ಮಂಡ್ಯ

ರಾಮಯ್ಯ – ಚಿಕ್ಕಬಳ್ಳಾಪುರ

ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ – ದಾವಣಗೆರೆ

ಡಾ. ಆರ್.ವಿ. ನಾಡಗೌಡ – ಗದಗ

ಮನೋರಂಜನೆ ರಾಜ್ಯ