ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್ರಿ ಯವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು.





ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ದೊಡ್ಡ ಸಂದೇಶವನ್ನು ನೀಡುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರಿಂದ ಹಿಡಿದು ಲಕ್ಷಕ್ಕಿಂತ ಹೆಚ್ಚಿನ ಅಂಬಿಯಾಗಳೂ, ಔಲಿಯಾಗಳೂ ಕಲಿಸಿದ್ದು ಕ್ಷಮೆಯ ಮೂಲಕ ಶಾಂತಿಯನ್ನು ಸ್ಥಾಪಿಸಿ ತ್ಯಾಗದ ಮೂಲಕ ಸೌಹಾರ್ದತೆಯನ್ನು ಕಾಪಾಡುವುದಾಗಿದೆ. ಅದರೊಂದಿಗೆ ಪ್ರತಿಯೊಬ್ಬರೂ ಸ್ವತಃ ಒಳಿತುಗಳನ್ನು ಹೆಚ್ಚಿಸಿ ಸೃಷ್ಟಿಕರ್ತನೆಡೆಗೆ ಹತ್ತಿರವಾಗಬೇಕು. ಹಾಗಿದ್ದರೆ ಈ ಪ್ರಪಂಚದಲ್ಲಿ ಎಲ್ಲವೂ ನಮಗೆ ಅನುಕೂಲವಾದ ರೀತಿಯಲ್ಲಿ ಪರಿವರ್ತನೆ ಆಗಬಹುದು. ನಮ್ಮ ಮುಂದಿನ ನಡೆಗಳೆಲ್ಲವೂ ಅದಕ್ಕಾಗಿ ಆಗಿರಬೇಕೆಂಬ ಸಂದೇಶದೊಂದಿಗೆ ಕುಟುಂಬದೊಂದಿಗಿನ ಸಂಪರ್ಕವನ್ನು ಹೆಚ್ಚಿಸಬೇಕೆಂದೂ ಈ ದಿನದಲ್ಲಿ ಪ್ರತ್ಯೇಕವಾಗಿಯೂ ಹೆಚ್ಚಿಸಬೇಕೆಂದೂ, ಎಲ್ಲರೂ ಪರಸ್ಪರ ಮಾತನಾಡಿ ಸಂತೋಷ ಹಂಚಿಕೊಳ್ಳಬೇಕೆಂದೂ ಸಂದೇಶವನ್ನು ಸಾರುತ್ತಾ ಉಧ್ಭೋದನೆ ನಡೆಸಿದರು. ಈದ್ ನಮಾಝಿನಲ್ಲಿ ಏಣಾವರ ನಿವಾಸಿಗಳಾದ ಪುರುಷರೆಲ್ಲರೂ ಭಾಗವಹಿಸಿದರು.