ದಕ್ಷಿಣ ಕನ್ನಡ  ಮಳೆಯ ಆರಂಭದಲ್ಲೇ ಕೆಸರುಮಯವಾದ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ : ಸಂಚಾರ ದುಸ್ಥರ

ದಕ್ಷಿಣ ಕನ್ನಡ  ಮಳೆಯ ಆರಂಭದಲ್ಲೇ ಕೆಸರುಮಯವಾದ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ : ಸಂಚಾರ ದುಸ್ಥರ

ಬಂಟ್ವಾಳ: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವೆಡೆ ಬಾರೀ ಮಳೆಯಾಗುತ್ತಿದೆ. ಮಳೆಯ ತಂಪು ಬಿಸಿಲ ಬೇಗೆಯಲ್ಲಿದ್ದವರ ತಣಿಸಿದರೂ , ಕಲ್ಲಡ್ಕದಲ್ಲಿ ಪ್ರಯಾಣಿಸುವ ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೀವ್ರ ಕಷ್ಟಕರವಾಗಿದೆ.

ಹೆದ್ದಾರಿ ಕಾಮಗಾರಿ ಹಾಗೂ ಪ್ಲೈ ಓವರ್ ಕಾಮಗಾರಿ ನಡೆಯುತ್ತಿರುವ ಕಲ್ಲಡ್ಕದಲ್ಲಿ  ಸುರಿದ ಬಾರಿ ಗಾಳಿ ಮಳೆಗೆ ನೀರು ಹರಿದು ಹೋಗುವ ಚರಂಡಿ ವ್ಯವಸ್ಥೆ ಸರಿಯಾಗದೆ ಇದ್ದ ಪರಿಣಾಮ ರಸ್ತೆ ತುಂಬಾ‌ ಕೆಸರು ತುಂಬಿಕೊಂಡಿದ್ದು, ಅಲ್ಲಲ್ಲಿ ಉಂಟಾದ ಗುಂಡಿಯಿಂದ ವಾಹನಗಳು ಸರಾಗವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಮೇ.13 ರಂದು ಬೆಳಿಗ್ಗೆಯಿಂದಲೇ ಕುದ್ರೆಬೆಟ್ಟುವಿನಿಂದ ನರಹರಿ ವರೆಗೂ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಕೆಸರುನೀರು ತುಂಬಿಕೊಂಡಿದ್ದ ಕಾರಣ ವಾಹನಗಳು ಸಂಚಾರಕ್ಕೆ ಪರದಾಟ ನಡೆಸುವ ದೃಶ್ಯ ಕಂಡುಬಂತು. ಒಂದೇ ಮಳೆಗೆ ರಸ್ತೆ ಈ ರೀತಿಯಲ್ಲಿ ಮಾರ್ಪಾಡುಗೊಂಡರೆ ಇನ್ನು ಮಳೆಗಾಲದಲ್ಲಿ ಸಂಚಾರ ಮಾಡುವುದು ಸಾಧ್ಯನಾ? ಎಂಬ ಪ್ರಶ್ನೆ ಸಾರ್ವಜನಿಕರದ್ದು. ರಸ್ತೆಯಿಲ್ಲದ ಕಲ್ಲಡ್ಕದಲ್ಲಿ ಕೆಸರು ಮಯವಾಗಿರುವ ಗದ್ದೆಯಲ್ಲಿ ವಾಹನ ಸಂಚಾರ ಮಾಡುವುದು ಅಪಾಯವೇ ಸರಿ.

ಕಾಮಗಾರಿ ನಡೆಯುತ್ತಿರುವ ಈ ಭಾಗದಲ್ಲಿ ವಾಹನ ಸವಾರರಿಗೆ ಅಪಾಯವಂತೂ ತಪ್ಪಿದ್ದಲ್ಲ‌. ಘನಗಾತ್ರದ ಮೆಷಿನರಿ ನ ಮೂಲಕ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಚೂರು ಹೆಚ್ಚುಕಮ್ಮಿಯಾಗಿ ಸಾಮಾಗ್ರಿಗಳು ಬಿದ್ದರೂ ಮನುಷ್ಯನ ಜೀವಕ್ಕೆ ಅಪಾಯವಿದೆ. ಹಾಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ಚಲಾಯಿಸುವ ಅಗತ್ಯವಿದೆ, ಹಲವು ಸಮಯಗಳಿಂದ ನಡೆಯುತ್ತಿರುವ ಕಾಮಗಾರಿ ಈ ಮಳೆಗಾಲದ ಮೊದಲು ಮುಗಿಯುವುದು ಸಾಧ್ಯವಿಲ್ಲ, 

ಸಂಭಂದ ಪಟ್ಟವರು ವಾಹನ ಸಂಚಾರಕ್ಕೆ ಅನುವಾಗಲು ತಾತ್ಕಾಲಿಕವಾಗಿಯಾದರು ಸರ್ವಿಸ್ ರಸ್ತೆ ಸರಿ ಪಡಿಸಿಕೊಡಲು ಆಗ್ರಹಿಸಿದಿದ್ದಾರೆ.

ರಾಜ್ಯ