ಅರಂತೋಡು ಪಾದಾಚಾರಿಗೆ ಮೀನು ಸಾಗಾಟ ಓಮಿನಿ ಕಾರು ಡಿಕ್ಕಿ :ಗಂಭೀರ ಗಾಯಗೊಂಡ ಅರಂತೋಡಿನ ವ್ಯಕ್ತಿ ಸಾವು

ಅರಂತೋಡು ಪಾದಾಚಾರಿಗೆ ಮೀನು ಸಾಗಾಟ ಓಮಿನಿ ಕಾರು ಡಿಕ್ಕಿ :ಗಂಭೀರ ಗಾಯಗೊಂಡ ಅರಂತೋಡಿನ ವ್ಯಕ್ತಿ ಸಾವು

ಪಾದಾಚಾರಿಗೆ ಓಮಿನಿ ಕಾರು ಡಿಕ್ಕಿ ಹೊಡೆದು ಪಾದಚಾರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ ಮೃತಪಟ್ಟ ವ್ಯಕ್ತಿಯನ್ನು ಅರಂತೋಡು ಉಳುವಾರು ತೀರ್ಥರಾಮ ಎಂದು ಗುರುತಿಸಲಾಗಿದೆ

ಮೀನು ವ್ಯಾಪಾರಕ್ಕೆಂದು ಹೋಗುತ್ತಿದ್ದ ಓಮಿನಿ ಕಾರು, ಪಾದಾಚಾರಿ ಉಳುವಾರು ನಿವಾಸಿ ತೀರ್ಥರಾಮ ಎಂಬುವರಿಗೆ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗಳಾಗಿದ್ದು , ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು ಹೇಳಲಾಗಿದೆ.ಅವರು ಕೃಷಿಕರಾಗಿದ್ದು ಪತ್ನಿ ಪುತ್ರ ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ರಾಜ್ಯ