ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿ ಜೆ ಪಿ ಯಿಂದ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣಾ ಕಣಕ್ಕಿಳಿಸಲಿ: ಸುಳ್ಯದಲ್ಲಿ ಸಮನ್ವಯ ವೇದಿಕೆ ಒತ್ತಾಯ..

ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿ ಜೆ ಪಿ ಯಿಂದ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣಾ ಕಣಕ್ಕಿಳಿಸಲಿ: ಸುಳ್ಯದಲ್ಲಿ ಸಮನ್ವಯ ವೇದಿಕೆ ಒತ್ತಾಯ..

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ
ಪಕ್ಷದಿಂದ ಸುಳ್ಯ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು
ಕಣಕ್ಕಿಳಿಸುವಾಗ ಹೊರಗಿನಿಂದ ಅಭ್ಯರ್ಥಿಗಳನ್ನು
ಗುರುತಿಸಿ ಕಣಕ್ಕಿಳಿಸಬಾರದು. ಆ ರೀತಿ ಮಾಡುವುದಾದರೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರವರನ್ನು ಮುಂದುವರಿಸಬೇಕೆಂದು ಹಿಂದೂ ಭಾವೈಕ್ಯ ಪರಿಶಿಷ್ಟ ಜಾತಿ ಸಮನ್ವಯ ವೇದಿಕೆ ಇಂದು ಸುಳ್ಯದಲ್ಲಿ ಒತ್ತಾಯಿಸಿದೆ.


ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ
ಮಾತನಾಡಿದ ಸಮಿತಿಯ ಮುಖಂಡ ಸಂಜಯ್
ಕುಮಾರ್ ಪೈಚಾರ್, ಸುಳ್ಯ ವಿಧಾನಸಭಾ ಕ್ಷೇತ್ರವು
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು ಕಳೆದ ಆರು
ಅವಧಿಯಲ್ಲಿ ಬಿಜೆಪಿಯಿಂದ ಎಸ್ ಅಂಗಾರ ರವರು
ಪ್ರತಿನಿಧಿಯಾಗಿ ಸ್ಪರ್ಧಿಸಿ ಶಾಸಕರಾಗಿ ಇದೀಗ ಸಚಿವರಾಗಿ ಕಾರ್ಯವನ್ನು ನಡೆಸುತ್ತಿದ್ದಾರೆ.ಆದರೆ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಬದಲಾವಣೆಯಾಗುತ್ತಾರೆ ಎಂದು ವದಂತಿಗಳು ಇದ್ದು, ಸುಳ್ಯ ವಿಧಾನಸಭಾ ಕ್ಷೇತ್ರ ಬಿಟ್ಟು ಹೊರಗಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಸುಳ್ಯ ಕ್ಷೇತ್ರ ಬಿಟ್ಟು ಹೊರಗಿನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದನ್ನು ಸಮನ್ವಯ ಸಮಿತಿ ವಿರೋಧಿಸುತ್ತದೆ. ಸುಳ್ಯದಲ್ಲಿಯೇ ಅರ್ಹ ಅಭ್ಯರ್ಥಿಗಳು ಇದ್ದಾರೆ.ಅವರಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಯಲಿ, ಅದಿಲ್ಲವಾದರೆ ಎಸ್ ಅಂಗಾರ ಮತ್ತೆ ಮುಂದುವರಿಯಲಿ ಎಂದು ಆಗ್ರಹ ವ್ಯಕ್ತ ಪಡಿಸಿದ್ದಾರೆ.ಕೇಶವ ಮಾಸ್ತರ್ ಹೊಸಗದ್ದೆ ಮಾತನಾಡಿ ಇತ್ತೀಚಿಗೆ ಮಾಧ್ಯಮಗಳಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿದೆ. ಪಕ್ಷದಲ್ಲಿ ಚುನಾವಣೆಗೆ ಯಾರು ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಮತ್ತು ಸಂಘಟನೆ ತೀರ್ಮಾನ ಕೈಗೊಳ್ಳುತ್ತದೆ. ಹಾಗಿದ್ದರೂ ಹೊರಗಿನಿಂದ ಅಭ್ಯರ್ಥಿಗಳನ್ನು ತಂದು ನಿಲ್ಲಿಸುವುದನ್ನು ನಾವು ವಿರೋಧಿಸುತ್ತೇವೆ.


ಅರ್ಹರು ನಮ್ಮಲ್ಲೇ ಇರುವಾಗ ಅವರಲ್ಲಿ ಒಬ್ಬರನ್ನು
ಆಯ್ಕೆ ಮಾಡಿ ಅವರಿಗೆ ಅವಕಾಶ ನೀಡಬೇಕೆಂದು ಅವರುಹೇಳಿದರು.ಇದೇ ವೇಳೆ ಮಾತನಾಡಿದ ಜಿ ಜಗನ್ನಾಥ ಜಯನಗರ, ಇದು ಯಾರ ಪರವಾಗಿಯೂ ಮಾಡುವಂತಪತ್ರಿಕಾಗೋಷ್ಠಿಯಲ್ಲ, ನಮ್ಮೆಲ್ಲರ ಏಕೈಕ ಉದ್ದೇಶ ಒಂದೇ ಆಗಿದೆ. ಹೊರಗಿನವರನ್ನು ತಂದು ಸುಳ್ಯದ ಅಭ್ಯರ್ಥಿಯಾಗಿ ಕಣಕ್ಕಿಳಿಸಬಾರದು. ನಮ್ಮ ಸುಳ್ಯದವರಿಗೆ ಅವಕಾಶವನ್ನು ನೀಡಬೇಕು. ಈ ಚುನಾವಣೆಯ ಹಿತ ದೃಷ್ಟಿಯಿಂದ ಹಿಂದೂ ಭಾವೈಕ್ಯ ಪರಿಶಿಷ್ಟ ಜಾತಿ ಸಾಮಾನ್ಯಯ ವೇದಿಕೆಯನ್ನು ರಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಮುದಾಯದ ಜನಾಂಗದ ಪರವಾಗಿ,ಮತ್ತು ಅವರ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದು. ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಇಂದಿಗೂ ಕೂಡ ನಮ್ಮ ಸಮುದಾಯದ ಜನರು ಸಂಕಷ್ಟದಲ್ಲಿದ್ದಾರೆ. ಅಂಥವರ ಸೇವೆ ಅಭಿವೃದ್ಧಿಗಾಗಿ ಈ ವೇದಿಕೆ ಕಾರ್ಯಚರಿಸಲಿದೆ ಎಂದು ಹೇಳಿದರು.ಮುಖಂಡ ಚನಿಯ ಕಲ್ಲಡ್ಕ ರವರು ಮಾತನಾಡಿ ನಮ್ಮೆಲ್ಲರ ಕೋರಿಕೆ ಒಂದೇ ಆಗಿದೆ. ಯಾವುದೇ ಕಾರಣಕ್ಕೂ ಹೊರಗಿನ ವ್ಯಕ್ತಿಗಳನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಕಣಕ್ಕಿಳಿಸಬಾರದು. ಸುಳ್ಯದಿಂದಲೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು.


ತೊಡಗಿಸಿಕೊಳ್ಳಲಾಗುವುದು. ತಾಲೂಕಿನ ಬೇರೆ ಬೇರೆ
ಕಡೆಗಳಲ್ಲಿ ಇಂದಿಗೂ ಕೂಡ ನಮ್ಮ ಸಮುದಾಯದ ಜನರು ಸಂಕಷ್ಟದಲ್ಲಿದ್ದಾರೆ. ಅಂಥವರ ಸೇವೆ ಅಭಿವೃದ್ಧಿಗಾಗಿ ಈ ವೇದಿಕೆ ಕಾರ್ಯಚರಿಸಲಿದೆ ಎಂದು ಹೇಳಿದರು. ಮುಖಂಡ ಚನಿಯ ಕಲ್ತಡ್ಕ ರವರು ಮಾತನಾಡಿ ನಮ್ಮೆಲ್ಲರ ಕೋರಿಕೆ ಒಂದೇ ಆಗಿದೆ. ಯಾವುದೇ ಕಾರಣಕ್ಕೂ ಹೊರಗಿನ ವ್ಯಕ್ತಿಗಳನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಕಣಕ್ಕಿಳಿಸಬಾರದು.
ಸುಳ್ಯದಿಂದಲೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ
ಮಾಡಬೇಕೆಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಮುಖಂಡರುಗಳಾದ ಶಂಕರ್ ಪೆರಾಜೆ, ಅಚ್ಚುತ ಗುತ್ತಿಗಾರು, ಪ್ರಕಾಶ್ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು.

ರಾಜ್ಯ