ಮಂಗಳೂರಿನಲ್ಲಿ ಚೂರಿ ಇರಿತ ಪ್ರಕರಣದಲ್ಲಿ ಗಾಯಾಳು ಸಾವು..

ಮಂಗಳೂರಿನಲ್ಲಿ ಚೂರಿ ಇರಿತ ಪ್ರಕರಣದಲ್ಲಿ ಗಾಯಾಳು ಸಾವು..


ಮಂಗಳೂರಿನಲ್ಲಿ ಚೂರಿ ಇರಿತ ಪ್ರಕರಣದಲ್ಲಿ ಗಾಯಾಳು ಸಾವನಪ್ಪಿರುವದಾಗಿ ತಿಳಿದು ಬಂದಿದೆ ಇರಿತಕ್ಕೆಒಳಗಾಗಿ ತೀವ್ರ ಗಾಯ ಗೊಂಡಿದ್ದ ಗಾಯಾಳು ಸಾವನ್ನಪ್ಪಿದ್ದಾರೆ.
ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ಈ ಘಟನೆ ಇಂದು ಸಂಜೆ 4.15ರ ಸುಮಾರಿಗೆ ನಡೆದಿದೆ. ಚೂರಿ ಇರಿತದಿಂದ ಮೃತಪಟ್ಟ ವ್ಯಕ್ತಿಯನ್ನು ಅತ್ತಾವರ ನಿವಾಸಿ ರಾಘವ ಆಚಾರಿ (50) ಎಂದು ಗುರುತಿಸಲಾಗಿದೆ.ಸಿಸಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿರುವ ಸಾಧ್ಯತೆಯಿದ್ದು, ಪರಿಶೀಲನೆ ನಡೆಯುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ರಾಘವ ಅವರು ಗೋಲ್ಡ್ ಪ್ಯಾಲೆಸ್ ಜ್ಯುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಮಂಗಳೂರು ಜ್ಯುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ, ಪತ್ನಿಯನ್ನು ಅಗಲಿದ್ದಾರೆ.

ರಾಜ್ಯ