
ಹೌದು ಮುಂಬರುವ ವಿಧಾನಸಭಾ ಚುನಾವಣೆಯಹಿನ್ನಲೆ ಯಲ್ಲಿ ಚುನಾವಣಾ ಆಯೋಗದ ಸೂಚನೆಯನ್ವಯ ಅಧಿಕಾರಿಗಳ ವರ್ಗಾವಣೆಯಾಗುತ್ತಿದ್ದು ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರಿಗೂ ವರ್ಗಾವಣೆ ಆದೇಶವಾಗಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯ
ತರಿಕೆರೆ ಗ್ರಾಮಾಂತರ ವೃತ್ತಕ್ಕೆ
ವರ್ಗಾವಣೆ ಮಾಡಲಾಗಿತ್ತು , ಅವರ ಸ್ಥಾನಕ್ಕೆ ಅಂಕೋಲದಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿರುವ ಸಂತೋಷ್ ಶೆಟ್ಟಿ ಎಂಬವರನ್ನು ಸೂಚಿಸಿತ್ತು ಇದೀಗ ಇದನ್ನು ಮತ್ತೆ ಬದಲಾಯಿಸಿ ರವೀಂದ್ರ ಸಿ ಎಂ ಅವರನ್ನು ಹಾಸನದ ಡಿ ಸಿ ಆರ್ ಬಿ ಯಿಂದ ಸುಳ್ಯಕ್ಕೆ ವರ್ಗಾವಣೆ ಆದೇಶ ಮಾಡಲಾಗಿದೆ.