ಗೂನಡ್ಕ-ಪೆರುಂಗೋಡಿ -ಪೇರಡ್ಕ ಬಾಗಗಳಿಗೆ ಸಂಪರ್ಕ ಕಲ್ಪಿಸುವ ಕಾಲು ದಾರಿ ಉದ್ಘಾಟನೆ.

ಗೂನಡ್ಕ-ಪೆರುಂಗೋಡಿ -ಪೇರಡ್ಕ ಬಾಗಗಳಿಗೆ ಸಂಪರ್ಕ ಕಲ್ಪಿಸುವ ಕಾಲು ದಾರಿ ಉದ್ಘಾಟನೆ.

ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗೂನಡ್ಕ-ಪೆರುಂಗೋಡಿ -ಪೇರಡ್ಕ ಬಾಗಗಳಿಗೆ ಸಂಪರ್ಕ ಕಲ್ಪಿಸುವ ಕಾಲು ದಾರಿಗೆ ಗೂನಡ್ಕ ಬಳಿ 3ಲಕ್ಷ ರೂಪಾಯಿ ವೆಚ್ಚದ ಕಾಲು ಸೇತುವೆ ಉದ್ಘಾಟನೆ ಕಾರ್ಯಕ್ರಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಸಂಪಾಜೆ ಕ್ರಷಿ ಪತ್ತಿನ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ನೆರವೇರಿಸಿ. ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಗ್ರಾಮ ಪಂಚಾಯತ್ ಮೂಲಕ ನೆರವೇರಿದೆ. ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಪಿ. ಜಗದೀಶ್ ಮಾತನಾಡಿ ಗ್ರಾಮದ ಅಭಿವೃದಿಯಲ್ಲಿ ಈ ಸೇತುವೆ ಪ್ರಮುಖ ಕೊಂಡಿಯಾಗಿದೆ. ಈ ಸೇತುವೆ ಗ್ರಾಮದ ಸಂಪರ್ಕದ ನಡುವೆ ಜನರ ಹ್ರದಯ ಜೋಡಿಸುವ ಸೇತುವೆಯಾಗಿ ಜನ ಮಾನಸದಲ್ಲಿ ಉಳಿಯಲಿ ಎಂದು ಶುಭ ಹಾರೈಕೆ ಮಾಡಿದರು. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್ ಸಂಪಾಜೆ .ಸವಾದ್ ಗೂನಡ್ಕ ವಿಮಲಾ ಪ್ರಸಾದ್ ಅನುಪಮಾ, ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾದ ತಾಲೂಕು ಕಾರ್ಯದರ್ಶಿ ವಿಜಯ ಆಲಡ್ಕ, ರಹೀಮ್ ಬೀಜದಕಟ್ಟೆ, ಹಾರೀಸ್ ಝಮ್ ಝಮ್. ಅಶ್ರಫ್ ಪೆಳ್ತಡ್ಕ. ಪೇರಡ್ಕ ಜಮಾಯತ್ ಕಾರ್ಯದರ್ಶಿ ಟಿ. ಎಂ. ರಝಕ್, ಸಿ. ಎಂ. ಅಬ್ದುಲ್ಲ. ಹನೀಫ್ ಗೂನಡ್ಕ. ಅಶ್ರಫ್ ಕೆ. ಎಸ್.ಪಂಚಾಯತ್ ಸಿಬ್ಬಂದಿಗಳಾದ ಭರತ್, ಹರ್ಷಿತ್ ಮೊದಲದವರು ಉಪಸ್ಥಿತರಿದ್ದರು.

ರಾಜ್ಯ