ಸುಳ್ಯ ತಾಲೂಕಿನ ಸಾಲಮನ್ನಾ ವಂಚಿತರ ಸಮಾಲೋಚನಾ ಸಭೆಗೆ ನಿರ್ಧಾರ: ಕಾನೂನು ಹೋರಾಟಕ್ಕೆ ಸಿದ್ದತೆ .

ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಕೃಷಿಸಾಲ ಮನ್ನಾ ಘೋಷಣೆ ಮಾಡಿದ್ದರು, ನಂತರದ ದಿನಗಳಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಿತ್ತು , ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು, ಈ ಸರಕಾರ ಬಂದ ನಂತರವೂ ಹಲವಾರು ರೈತರ ಸಾಲಗಳನ್ನು ಮನ್ನಾ ಮಾಡಿದ್ದರು.ಈ ಮಧ್ಯೆ ತಾಂತ್ರಿಕ ಕಾರಣಕ್ಕೆ ರಾಜ್ಯದಲ್ಲಿ ಹಲವು ರೈತರು ಈ ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದರು, ಮತ್ತು ಕಳೆದ ನಾಲ್ಕು ವರಷಗಳಿಂದ ಸಾಲ ಮನ್ನಾ ಹಣ ಖಾತೆಗೆ ಜಮಾವಣೆಯಾಗುವ ನಿರೀಕ್ಷೆಯಲ್ಲಿ ಇವರಿದ್ದರು ಇನ್ನೂ ಬಾರದ ಹಿನ್ನಲೆಯಲ್ಲಿ ಇದೀಗ ರೈತರು ರೋಸಿ ಹೋಗಿದ್ದಾರೆ.
2018 ನೇ ಸಾಲಿನಲ್ಲಿ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದ ಬೆಳೆಸಾಲದ ಪೈಕಿ ರೂಪಾಯಿ ಒಂದು ಲಕ್ಷ ಸಾಲಮನ್ನಾ ಯೋಜನೆಯನ್ನು ಘೋಷಿಸಿ 4 ವರ್ಷ ಕಳೆದರೂ ಇನ್ನೂ ಹಲವು ರೈತರಿಗೆ ಈ ಸೌಲಭ್ಯ ಸಿಗದೇ ಇರುವುದರಿಂದ ಸುಳ್ಯ ಭಾಗದ ಹಲವು ರೈತರು ಸಂಘಟನೆ ಮಾಡಿ ಕಾನೂನು ಹೋರಾಟ ನಡೆಸಲು ಸಿದ್ದವಾಗಿರುವುದು ತಿಳಿದು ಬಂದಿದೆ.ಮತ್ತು ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ಮುಂದಿನ ಕಾನೂನಾತ್ಮಕ ಹೋರಾಟದ ಭಾಗವಾಗಿ ಸಮಾಲೋಚನಾ ಸಭೆಯನ್ನು ಸುಳ್ಯದ ಎಪಿಎಂಸಿಯಲ್ಲಿ ಜ.17 ರಂದು ಸಾಲಮನ್ನಾ ವಂಚಿತ ರೈತರ ಸಮಾವೇಶ ಸುಳ್ಯದ ಎ ಪಿ ಎಂ ಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಹೋರಾಟ ಸಮಿತಿಯ ಉಮಾಶಂಕರ್ ಅಡ್ಯಡ್ಕ ತಿಳಿಸಿದ್ದಾರೆ.

ರಾಜ್ಯ