
ಮನೆ ಮನೆಗೂ ಮೀನು ವಿತರಣೆಯೇ ಇಲಾಖೆಯ ಗುರಿ.”



ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮೀನುಗಾರಿಕಾ ಇಲಾಖೆ ವತಿಯಿಂದ ಆಧುನಿಕ ಮೀನು ಕೃಷಿ ತಂತ್ರಜ್ಞಾನ ಕುರಿತ ಮಾಹಿತಿ ಕಾರ್ಯಗಾರ ಇಂದು ಕೊಡಿಯಾಲಬೈಲು ಸಮುದಾಯ ಭವನದಲ್ಲಿ ನಡೆಯಿತು.

ಬಂದರು ಮತ್ತು ಮೀನುಗಾರಿಕೆ ಮತ್ತುಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಎಸ್ ಅಂಗಾರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತಾಡಿದ ಅವರು ಮೀನುಗಾರಿಕಾ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ನನಗೆ ಆತಂಕ ಇತ್ತು, ಬೇರೆಯವರಿಗೆ ನಾನು ಏನು ಮಾಡುತ್ತೇನೆ ಅನ್ನುವ ಕುತೂಹಲ ಇತ್ತು ಆದರೆ ಸತತ ಪ್ರಯತ್ನ ಮತ್ತು ವಿನೂತನ ಆಲೋಚನೆಯಿಂದ ರೈತರಿಗೆ ಮೀನುಗಾರಿಕೆ ಇಲಾಖೆಯಿಂದ ಸವಲತ್ತು ವಿತರಿಸಲು ಸಾಧ್ಯವಾಯಿತು.ಇಂದು 15000 ಮೀನು ಮರಿಗಳನ್ನು ವಿತರಿಸಲಿದ್ದು, ಇಂದು ವಿತರಿಸಿ ಸಾಕಲ್ಪಡುವ ಎಲ್ಲಾ ಮೀನುಗಳನ್ನು ಇಲಾಖೆ ವತಿಯಿಂದ ಖರೀದಿ ಮಾಡಲಾಗುವುದು,ಈ ನಿಟ್ಟಿನಲ್ಲಿ ಈಗಾಗಲೇ 32 ಮಂದಿ ಪರಿಣತರ ತಂಡ ಸಿದ್ದಗೊಂಡಿದೆ,ಹಲವು ಮಂದಿ ಈಗಾಗಲೆ ಹಲವು ಮಂದಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ, ಪುತ್ತೂರಿನ ಶಾಂತಿ ಮೊಗೇರಿನಲ್ಲಿ ಈಗಾಗಲೆ 3 ಎಕರೆ ಜಾಗದಲ್ಲಿ ಕೆರೆ ನಿರ್ಮಿಸಿ ಮೀನು ಸಾಕಾಣಿಕೆಗೆ ಯೋಜನೆ ಮಾಡಲಾಗಿದೆ, ಅಲ್ಲದೆ ಕೇಂದ್ರ ಸರಕಾದಿಂದ ಮತ್ಸ್ಯ ಸಂಪನ್ನ ಯೋಜನೆಯಲ್ಲಿ300 ವಾಹನಗಳನ್ನು ನೀಡುವ ಯೋಜನೆ ಹಾಕಿಗೊಂಡಿದೆ, ಮುಂದಿನ ದಿನಗಳಲ್ಲಿ ಮೀ ನು ಕೃಷಿಯಿಂದಲೂ ರೈತರು ಆರ್ಥಿಕ ಸಭಲರಾಗಬಹುದು ಎಂದರು. ವೇದಿಕೆಯಲ್ಲಿ ಮೀನುಗಾರಿಕಾ ನಿಗಮದ ಅಧ್ಯಕ್ಷ ಅಧ್ಯಕ್ಷರು ಎ. ವಿ ತೀರ್ಥರಾಮ, ದ. ಕ ಜಿಲ್ಲಾ ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಚಾರ್ಯ ಉಪನಿರ್ದೇಶಕ ದಿನೇಶ್ ಕುಮಾರ್, ಫ್ರೀಡಂ ಆಪ್ ಸಂಸ್ಥಾಪಕ ಸುಧೀರ್ ರಾವ್, ಇಲಾಖಾ ಮುಖ್ಯಸ್ಥರುಗಳಾದ ಡಾ. ಶಿವ ಕುಮಾರ್ ಮಗದ, ಚೇತನ್ ರಾವ್, ಡಾ. ಸುಶ್ಮಿತಾ ರಾವ್, ವಿಸ್ತರಣಾ ಅಧಿಕಾರಿ ಡಾ. ಸೋಮಶೇಖರ್, ಜಂಟಿ ನಿರ್ದೇಶಕ ಹರೀಶ್ ಕುಮಾರ್, ಬುಡಿಯಾರು ರಾಧಾಕೃಷ್ಣ ರೈ, ಸುಳ್ಯ ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮೀನು ಕೃಷಿ ಮತ್ತು ಇಲಾಖಾ ಸವಲತ್ತು , ನಿರ್ವಹಣೆ ಮಾತ್ತು ಮಾರುಕಟ್ಟೆ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು, ಹಲವರಿಗೆ ಉಚಿತ ಮೀನು ವಿತರಣೆ ನಡೆಯಿತು.
