ಭೂ ನ್ಯಾಯ ಮಂಡಳಿಯ ಸ್ಯದಸ್ಯರ ವಜಾ ಮಾಡಿರುವ ಶಾಸಕರ ನಡೆ ಸರಿಯಲ್ಲ: ಮಹಮ್ಮದ್ ಆಲಿ.

ಭೂ ನ್ಯಾಯ ಮಂಡಳಿಯ ಸ್ಯದಸ್ಯರ ವಜಾ ಮಾಡಿರುವ ಶಾಸಕರ ನಡೆ ಸರಿಯಲ್ಲ: ಮಹಮ್ಮದ್ ಆಲಿ.

ಪುತ್ತೂರು: ಭೂ ನ್ಯಾಯ ಮಂಡಳಿಯಲ್ಲಿ ತಮ್ಮ ಪರವಾಗಿ ಇರುವವರ ವಿರುದ್ಧವಾಗಿ ತೀರ್ಪು ನೀಡಿದ್ದಾರೆ ಎನ್ನುವ ಕಾರಣಕ್ಕೆ ಭೂ ನ್ಯಾಯ ಮಂಡಳಿಯ ಸದಸ್ಯರನ್ನು ಪುತ್ತೂರು ಶಾಸಕರು ವಜಾಗೊಳಿಸಿದ್ದಾರೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಆರೋಪಿಸಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ಳಿಪ್ಪಾಡಿಯ ಪೆರ್ನು ಗೌಡ ಮತ್ತು ಶಕುಂತಳಾ ರೈ ನಡುವೆ ಕಳೆದ ಹಲವು ವರ್ಷಗಳಿಂದ ಗೇಣಿ ಹಕ್ಕಿನ ವಿಚಾರದಲ್ಲಿ ವ್ಯಾಜ್ಯವಿದೆ. ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಭೂ ನ್ಯಾಯ ಮಂಡಳಿ ಈಗಾಗಲೇ ಎರಡು ಬಾರಿ ಶಕುಂತಲಾ ರೈ ಪರವಾಗಿ ತೀರ್ಪು ನೀಡಿದೆ. ಇದೀಗ ಮತ್ತೆ ಭೂ ನ್ಯಾಯ ಮಂಡಳಿಯು ಶಕುಂತಲಾ ರೈ ಪರವಾಗಿ ತೀರ್ಪು ನೀಡಿದ್ದು, ಈ ತೀರ್ಪು ನೀಡಿದ ಭೂ ನ್ಯಾಯ ಮಂಡಳಿಯ ಸದಸ್ಯರನ್ನು ಇದೀಗ ಪುತ್ತೂರು ಶಾಸಕರು ವಜಾಗೊಳಿಸಿ ಹೊಸ ಸದಸ್ಯರ ಕಮಿಟಿಯನ್ನು ರಚಿಸಿದ್ದಾರೆ ಎಂದು ಆರೋಪಿಸಿದರು. ತನ್ನ ಪರವಾಗಿ ಇರುವವರಿಗೆ ವಿರುದ್ಧವಾಗಿ ತೀರ್ಪು ನೀಎಬಾರದೆಂದು ಶಾಸಕರು ಭೂ ನ್ಯಾಯ ಮಂಡಳಿಯ ಈ ಹಿಂದಿನ ಸದಸ್ಯರಿಗೆ ನಿರಂತರ ಒತ್ತಡವನ್ನು ಹೇರಿದ್ದರು. ಆದರೆ ಮಂಡಳಿ ಸದಸ್ಯರು ಶಾಸಕರ ಒತ್ತಡಕ್ಕೆ ಮಣಿಯದೆ ನ್ಯಾಯಯುತವಾಗಿ ಶಕುಂತಲಾ ರೈ ಪರವಾಗಿ ತೀರ್ಪು ನೀಡಿರುವ ಕಾರಣ ಶಾಸಕರು ಈ ರೀತಿಯ ಕ್ರಮ ಕೈಗೊಂಡಿದ್ದಾರೆ. ಬಿಹಾರ,ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವ್ಯವಸ್ಥೆಯನ್ನು ಶಾಸಕರು ಪುತ್ತೂರಿನಲ್ಲಿ ಆರಂಭಿಸುತ್ತಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯ