

ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದ ಘಟನೆ
ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ನ.24ರಂದು
ಸಂಭವಿಸಿದೆ. ಜಾಲ್ಸೂರು ಗ್ರಾಮದ ಕದಿಕಡ್ಕದ ಕೆ.ಎಂ. ಮೋನಪ್ಪ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಮನೆಯ ಅಡುಗೆ ಕೋಣೆಯೊಳಗೆ ಕ್ಲಾಪ್ ಬಿರುಕು ಬಿಟ್ಟಿದ್ದು, ನಾಲ್ಕು ಬಲ್ಟ್,ಸ್ವಿಚ್ ಬೋರ್ಡ್, ಸೇರಿದಂತೆ ವಿದ್ಯುತ್ ಕೇಬಲ್ ಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಈ ಬಾಗದಲ್ಲಿ ಮಳೆ ಸುರಿದಿದ್ದು ಒಮ್ಮಿಂದೊಮ್ಮಲೆ ಸಿಡಿಲು ಮನೆಗೆ ಅಪ್ಪಳಿಸಿದೆ, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
