ಸುಳ್ಯ ಸೀಮೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ತೊಡಿಕಾನದಲ್ಲಿ ಇದೇ ಬರುವ ಆಗಸ್ಟ್ 27, 2025 (ಬುಧವಾರ) ರಂದು ಗಣೇಶ ಚತುರ್ಥಿ ಪ್ರಯುಕ್ತ ಭಕ್ತಿಪೂರ್ಣ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದ ಅಂಗವಾಗಿ 108 ತೆಂಗಿನಕಾಯಿ ಗಣಪತಿ ಹವನ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಒಂದು ಗಣಪತಿ ಹವನಕ್ಕೆ ಶುಲ್ಕ ರೂ.100/- ನಿಗದಿಪಡಿಸಲಾಗಿದೆ.
ಭಕ್ತಾದಿಗಳಿಗೆ ಸರ್ವರಿಗೂ ಆದರದ ಸ್ವಾಗತವನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ: 📞 08257-295242, 9483140142, 9980162648

