ಸುಳ್ಯ: ಸುಳ್ಯದ ಕುರುಂಜಿಭಾಗ್ ಭಸ್ಮಡ್ಕ ರಸ್ತೆ ಕುಸಿದು 15 ದಿನ ಕಳೆದರೂ ಅದನ್ನು ಸರಿ ಪಡಿಸುವ ಗೊಜಿಗೆ ಹೋಗದೆ ಕೇವಲ 100 ರೂ ಬ್ಯಾನರ್ ಅಳವಡಿಸಿ ಪಟ್ಟಣ ಪಂಚಾಯತ್ ಕೈ ತೊಳೆದು ಕೊಂಡಿದೆ. ಈ ಮೊದಲೇ ಇಕ್ಕಟ್ಟಾದ ರಸ್ತೆಯಾಗಿದ್ದ ಈ ರಸ್ತೆಯಲ್ಲಿ ಈಗ ಒಂದು ವಾಹನ ಕೂಡ ಕಷ್ಟದಲ್ಲಿ ಸಾಗುವ ಸ್ಥಿತಿ ನಿರ್ಮಾಣವಾಗಿದೆ.







ಕುಸಿದ ರಸ್ತೆಯ ಬದಿಯಲ್ಲಿನ ಮರ ಕೂಡ ಬೀಳುವ ಸ್ಥಿತಿಯಲ್ಲಿದ್ದು ಮಳೆಗಾಲದ ಸಮಯದಲ್ಲಿ ಮತ್ತೆ ಕುಸಿತವಾಗಿ ಸಂಪೂರ್ಣ ರಸ್ತೆ ಮುಚ್ಚುವ ಸಾಧ್ಯತೆ ಇದೆ. ತಕ್ಷಣ ಸಂಬಂಧಪಟ್ಟವರು ಕ್ರಮ ಕೈಗೊಂಡು ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.