ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ‘B’ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಕುಟುಂಬಸ್ಥರ ಸೇವೆಯಾಗಿ ಬೆಳ್ಳಿ ರಥ ಸಮರ್ಪಣೆಗೆ ಸಂಕಲ್ಪ ಮತ್ತು ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ ನೀಡುವ ಕಾರ್ಯಕ್ರಮ ಜೂನ್ 14 ರಂದು ದೇವಸ್ಥಾನದಲ್ಲಿ ನಡೆಯಿತು.


ರಥ ನಿರ್ಮಾಣದ ಬೆಳ್ಳಿಯ ಸಾಂಕೇತಿಕ ಸಮರ್ಪನೆಯನ್ನು ಬೆಳ್ಳಿಯ ನಾಣ್ಯ ವನ್ನು ಸಮರ್ಪಿಸುವ ಮೂಲಕ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಶ್ ಇಂಜಾಡಿ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು,ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಆಯ್ಯಪ್ಪ ಸುತಗುಂಡಿ ಅನುಮತಿ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಭರತ್ ಮುಂಡೋಡಿ, ನಿತ್ಯಾನಂದ ಮುಂಡೋಡಿ , ಮೋಹನ್ ರಾಮ್ ಸುಳ್ಯ, ಕೆ. ವಿ.ಜಿ ಕಮಿಟಿ ‘B’ ಸಮೂಹ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ಸಂಸ್ಥೆಯ ಪ್ರಾಂಶುಪಾಲರುಗಳು,ಡಾ. ರೇಣುಕಾ ಪ್ರಸಾದ್ ಕೆ ವಿ ಅವರ ಹಿತೈಷಿಗಳು , ಅಭಿಮಾನಿಗಳು ಮತ್ತು ಕೆ.ವಿ.ಜಿ ಕಮಿಟಿ ‘B’ ನೌಕರ ವೃಂದದವರು ಸೇರಿ ಸಾವಿರಾರು ಮಂದಿ ಈ ಶುಭ ಮುಹೂರ್ತಕ್ಕೆ ಸಾಕ್ಷಿಯಾದರು.
ಬೆಳ್ಳಿ ರಥ ತಮ್ಮ ವೈಯಕ್ತಿಕ ಸೇವೆಯಾದರು ಈ ವಿಶೇಷ ಸಂದರ್ಭದಲ್ಲಿ ಡಾ. ರೇಣುಕಾ ಪ್ರಸಾದ್ ಕೆ ವಿ ಅವರು ತಮ್ಮ ಹಿತೈಷಿಗಳು ಅಭಿಮಾನಿಗಳು ಮತ್ತು ತಮ್ಮ ನೌಕರ ವೃಂದಕ್ಕೆ ವಿಶೇಷವಾಗಿ ಈ ಅವಿಸ್ಮರಣೀಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಮತ್ತು ಈ ಕಾರ್ಯದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಲು ಅನುವು ಮಾಡಿಕೊಟ್ಟದ್ದು ಜನರ ಮಚುಗೆಯನ್ನು ಪಡೆಯಿತು.