ಮಂಗಳೂರು : ಕಾರಿನ ಗಾಜು ಒಡೆದು ಕಳವು; ಆರೋಪಿ ಬಂಧನ

ಮಂಗಳೂರು : ಕಾರಿನ ಗಾಜು ಒಡೆದು ಕಳವು; ಆರೋಪಿ ಬಂಧನ

ಮಂಗಳೂರು: ನಗರದ ಕಂಕನಾಡಿ ಮಾರ್ಕೆಟ್‌ ಬಳಿ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್‌, ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಕೃತ್ಯ ನಡೆದ 24 ತಾಸಿನೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ತಾಲೂಕು ಅಡ್ಯಾರ್‌ಪದವು ಭರಿರತ್‌ ಮಂಜಿಲ್‌ ನಿವಾಸಿ ಅಬ್ದುಲ್‌ ಅಕ್ರಂ (33) ಬಂಧಿತ ಆರೋಪಿ.

ಡಿ.8ರಂದು ರಾತ್ರಿ ಕಂಕನಾಡಿ ಮಾರ್ಕೆಟ್‌ ಬಳಿ ಕಾರು ನಿಲ್ಲಿಸಿ ಪ್ರಯಾಣಿಕರು ಹೊಟೇಲ್‌ಗೆ ಹೋಗಿ ವಾಪಸ್‌ ಬಂದಾಗ ಕಾರಿನೊಳಗಿದ್ದ ಆಭರಣ, ಲ್ಯಾಪ್‌ಟಾಪ್‌ ಸಹಿತ 6.80 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವಾಗಿತ್ತು.ತನಿಖೆ ನಡೆಸಿದ ಪೊಲೀಸರು ಆರೋಪಿ ಅಕ್ರಂನನ್ನು ಬಂಧಿಸಿ ಆತನ ವಶದಲ್ಲಿದ್ದ ಚಿನ್ನಾಭರಣ, ಲ್ಯಾಪ್‌ಟಾಪ್‌ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್‌ ಸಹಿತ 7.30 ಲ.ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ನಿರೀಕ್ಷಕ ಸೋಮಶೇಖರ್‌ ಜೆ.ಸಿ, ಪಿಎಸ್‌ಐ ಉಮೇಶ್‌ ಕುಮಾರ್‌ಎಂ.ಎನ್‌. ಮತ್ತು ಅಪರಾಧ ಪತ್ತೆ ವಿಭಾಗದ ಸಿಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ