ಸುಳ್ಯ: ಲಾರಿ ಢಿಕ್ಕಿ; ಕಾರು ಚಾಲಕ ಮೃತ್ಯು

ಸುಳ್ಯ: ಲಾರಿ ಢಿಕ್ಕಿ; ಕಾರು ಚಾಲಕ ಮೃತ್ಯು

ಸುಳ್ಯ: ಓಮ್ನಿ ಕಾರು ಮತ್ತು ಲಾರಿ ನಡುವಿನ ಅಪಘಾತದಲ್ಲಿ ಸುಳ್ಯದ ಅಜ್ಜಾವರದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ – ಕಾಸರಗೋಡು ಅಂತರಾಜ್ಯ ರಸ್ತೆಯ ಕಾಸರಗೋಡಿನ ಕುಂಟಾರು – ಮುರೂರು ಮಧ್ಯೆ ಮಂಗಳವಾರ ಸಂಭವಿಸಿದೆ.

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಮಹಮ್ಮದ್‌ ಕುಂಞಿ (65) ಮೃತರು.ಮಹಮ್ಮದ್‌ ಕುಂಞಿ ಅವರು ತಮ್ಮ ಮಗನನ್ನು ಕಾಸರಗೋಡಿಗೆ ಬಿಟ್ಟು ತನ್ನ ಕಾರು ಚಲಾಯಿಸಿಕೊಂಡು ಸುಳ್ಯಕ್ಕೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರು ಚಲಾಯಿಸುತ್ತಿದ್ದ ಮಹಮ್ಮದ್‌ ಜುಂಞಿ ಅವರು ಗಂಭೀರ ಗಾಯಗೊಂಡು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ