ಮಾ.31ರಂದು ಕರಿಕೆ ತೋಟಂ,ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಮುತ್ತಪ್ಪ ದೇವರ ವೆಳ್ಳಾಟ್ಟ

ಮಾ.31ರಂದು ಕರಿಕೆ ತೋಟಂ,ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಮುತ್ತಪ್ಪ ದೇವರ ವೆಳ್ಳಾಟ್ಟ

ಸುಳ್ಯ , ಕೊಡಗು , ಮತ್ತು ಕೇರಳ ಗಡಿ ಭಾಗವಾದ ಕರಿಕೆಯ ತೋಟಂ,ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಮಾ.31ರಂದು ಶ್ರೀ ಮುತ್ತಪ್ಪ ದೇವರ ವೆಳ್ಳಾಟ್ಟ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಟ್ಟಸ್ಟಿಯವರು ತಿಳಿಸಿದ್ದಾರೆ.

, ಪರಶಿನಿಯ ಪರಶಿವನ ಅಪರೂಪದ ದಿವ್ಯ ಸಾನಿಧ್ಯವಾದ ಕರಿಕೆ ತೋಟಂ ಮುತ್ತಪ್ಪ ದೇವಸ್ಥಾನದಲ್ಲಿ ಮಾ 31ರಂದು ಪ್ರಾತಃ ಕಾಲ 5 ಗಂಟೆಗೆ ಗಣಪತಿ ಹವನ,ಬೆಳಿಗ್ಗೆ 10 ಗಂಟೆಗೆ ಪಯಂಕುಟ್ಟಿ,10.30 ಕ್ಕೆ ದೇವರನ್ನು ಮಲೆ ಇಳಿಸುವುದು, ನಂತರ 11 ಗಂಟೆಯ ನಂತರ ಶ್ರೀ ಮುತ್ತಪ್ಪ ದೇವರ ವೆಳ್ಳಾಟ ಪ್ರಾರಂಭವಾಗುತ್ತದೆ.ಮದ್ಯಾಹ್ನ ಪ್ರಸಾದ ವಿತರಣೆ , ಅನ್ನಪ್ರಸಾದ ವಿತರಣೆ ನಡೆದು, ಸಂಜೆ ಗಂಟೆ 4 ಕ್ಕೆ,ಶ್ರೀ ದೇವರನ್ನು ಮಲೆ ಏರಿಸುವುದು ನಡೆಯಲಿದೆ, ಊರ ಹಾಗೂ ಪರವೂರ ಸದ್ಭಕ್ತರು ಶ್ರೀ ದೇವರ ವೆಳ್ಳಾಟಕ್ಕೆ ಆಗಮಿಸಿ ಶ್ರೀ ಮುತ್ತಪ್ಪ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕರಿಕೆ ತೋಟಂ ಮುತ್ತಪ್ಪ ದೇವಸ್ಥಾನದ ಟ್ರಸ್ಟಿ ಎನ್ ಕೆ ಗಂಗಾಧರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ರಾಜ್ಯ