ಬಳ್ಪ: ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್‌ಮ್ಯಾನ್ ವಿದ್ಯುತ್ ಶಾಕ್‌ಗೆ ಬಲಿ: ಸ್ಥಳಕ್ಕೆ ಮೆಸ್ಕಾ ಅಧಿಕಾರಿಗಳು ದೌಡು.

ಬಳ್ಪ: ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್‌ಮ್ಯಾನ್ ವಿದ್ಯುತ್ ಶಾಕ್‌ಗೆ ಬಲಿ: ಸ್ಥಳಕ್ಕೆ ಮೆಸ್ಕಾ ಅಧಿಕಾರಿಗಳು ದೌಡು.

ವಿದ್ಯುತ್ ಶಾಕ್ ಗೆ ಲೈನ್‌ಮ್ಯಾನ್ ಬಲಿಯಾದ ಘಟನೆ ಜ.೫ ರಂದು ಬಳ್ಪದಿಂದ ವರದಿಯಾಗಿದೆ.ಬಳ್ಪ ಗ್ರಾಮದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ಘಟನೆ ಸಂಭವಿಸಿದೆ. ಹಾಸನ ಜಿಲ್ಲೆಯ ಹೊಳೆ ನರಸೀಪುರ ಸಿಗರನಹಳ್ಳಿ ರಘು ಎಸ್. ಆರ್. (32)ಮೃತ ಪಟ್ಟವರು.


ಅವರು ವಿದ್ಯುತ್ ದುರಸ್ಥಿ ನಡೆಸಲು ತೆರಳಿದ ವೇಳೆ ಘಟನೆ ಸಂಭವಿಸಿದೆ. ವಿದ್ಯುತ್ ಪರಿವರ್ತಕ ಬಳಿ ಮೃತ ದೇಹವಿದ್ದು, ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಆಗಮಿಸಿದ್ದಾರೆ.


ಮೃತರು ತಂದೆ, ತಾಯಿ,ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಾಜ್ಯ