ಭಾರತ ಮತ್ತು ಇಂಡೋನೇಷ್ಯಾ ನಡುವಿನ ಅಪೂರ್ವ ಸಂಬಂಧ

ಭಾರತ ಮತ್ತು ಇಂಡೋನೇಷ್ಯಾ ನಡುವಿನ ಅಪೂರ್ವ ಸಂಬಂಧ

ಭಾರತ ಮತ್ತು ಇಂಡೋನೇಷ್ಯಾ ದೇಶಗಳ ನಡುವಿನ ಬಾಂಧವ್ಯ ಅಪೂರ್ವವಾದದ್ದು. ಭಾರತ ಸ್ವತಂತ್ರವಾದಂದಿನಿಂದ ಇಂದಿನವರೆಗೂ ಅದು ಮುಂದುವರೆಯುತ್ತಾ ಬಂದಿದೆ.

ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಬಂದ ಇಂಡೋನೇಷ್ಯಾ ದೇಶದ ಅಧ್ಯಕ್ಷರು ಯಾರೆಲ್ಲಾ ಗೊತ್ತೇ?

1. ಅಧ್ಯಕ್ಷ ಸೂಕಾರ್ನೋ (1950)

ಅಧ್ಯಕ್ಷ ಸೂಕಾರ್ನೋ

ಭಾರತದ ಮೊದಲ ಗಣರಾಜ್ಯ ದಿನೋತ್ಸವ 1950ರ ಜನವರಿ 26 ರಂದು ಆಚರಿಸಲಾಯಿತು. ಅಂದಿನಿಂದ ದೇಶಕ್ಕೆ ಒಂದು ಅಭಿವೃದ್ಧಿಶೀಲ ಸಂವಿಧಾನದ ಅಂಗೀಕಾರವಾಯಿತು. ಆ ದಿನದಿಂದ ಭಾರತವು ಗಣರಾಜ್ಯವಾಯಿತು. ಅಲ್ಲಿನವರೆಗೂ ಬ್ರಿಟಿಷ್ ಆಡಳಿತವು ಕೊನೆಗೊಂಡು, ಪ್ರಜೆಗಳೇ ಆಡಳಿತ ಮಾಡುವ  ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿತು.

ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದವರು  ಇಂಡೋನೇಷಿಯಾದ ಅಂದಿನ ಅಧ್ಯಕ್ಷರಾಗಿದ್ದ ಸುಕಾರ್ನೋ. ಅವರು ಭಾರತದ ಗಣರಾಜ್ಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೊದಲನೇ ವಿದೇಶಿ ರಾಷ್ಟ್ರಧ್ಯಕ್ಷರಾಗಿದ್ದರು.  ಅವರ ಉಪಸ್ಥಿತಿಯಿಂದಾಗಿ ಭಾರತ – ಇಂಡೋನೇಷಿಯಾ ಬಾಂಧವ್ಯಗಳಲ್ಲಿ ದೀರ್ಘಕಾಲಿಕ ಪರಿಣಾಮವನ್ನು ಬೀರಿತು. ಭಾರತದ ಜಾಗತಿಕ ರಾಜತಾಂತ್ರಿಕ ಸ್ಥಾನವನ್ನು ಬಲಪಡಿಸಿತು, ಜೊತೆಗೆ ಹೊಸದಾಗಿ ಸ್ವಾತಂತ್ರ್ಯವಾದ ರಾಷ್ಟ್ರಗಳ ನಡುವಿನ ಸಹಕಾರವನ್ನು ಉತ್ತೇಜಿಸಿತು. ಅಂದು ಡಾ|| ರಾಜೇಂದ್ರ ಪ್ರಸಾದ್ ದೇಶದ ರಾಷ್ಟ್ರಪತಿಗಳಾಗಿದ್ದರು. ಮಾನ್ಯ ಜವಹರಲಾಲ್ ನೆಹರೂ ಅವರು ಪ್ರಧಾನ ಮಂತ್ರಿಗಳಾಗಿದ್ದರು.

ಅಧ್ಯಕ್ಷ ಸುಹಾರ್ತೋ (1974)

ಸುಹಾರ್ತೋ

ಇಂಡೋನೇಷಿಯಾದ ಅಧ್ಯಕ್ಷ ಸುಹಾರ್ತೋ ಅವರು 1974ರ ಜನವರಿ 26 ರಂದು ಭಾರತದ ಗಣರಾಜ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿದ್ದರು. ಅವರ ಭೇಟಿ ವಾಣಿಜ್ಯ, ರಕ್ಷಣೆ ಮತ್ತು ಸಾಂಸ್ಕೃತಿಕ ವಿನಿಮಯಗಳಲ್ಲಿ ಭಾರತ-ಇಂಡೋನೇಷಿಯಾ ದೇಶಗಳ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶವನ್ನು ಹೊಂದಿತ್ತು. ಇದು ಈ ಎರಡು ರಾಷ್ಟ್ರಗಳ ಸ್ನೇಹವನ್ನು ಬದ್ಧತೆಯನ್ನು ಸೂಚಿಸಿತು.

ಆ ಸಮಯದಲ್ಲಿ ಶ್ರೀಮಾನ್ ಫಕ್ರುದ್ದೀನ್ ಅಲಿ ಅಹ್ಮದ್ ಅವರು ದೇಶದ ಅಧ್ಯಕ್ಷರಾಗಿದ್ದರೆ, ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು

ಅಧ್ಯಕ್ಷೆ ಮೇಗಾವತಿ ಸುಕರ್ನೋಪುತ್ರಿ (2003)

ಮೆಗಾವತಿ ಸುಕರ್ನೋಪುತ್ರಿ

ಇಂಡೋನೇಷಿಯಾದ ಅಧ್ಯಕ್ಷೆ ಮೆಗಾವತಿ ಸುಕರ್ನೋಪುತ್ರಿ ಅವರು 2003ರ ಜನವರಿ 26 ರಂದು ಭಾರತದ ಗಣರಾಜ್ಯ ದಿನಾಚರಣೆಯ ಮುಖ್ಯ ಅತಿಥಿ ಆಗಿದ್ದರು. ಅವರ ಭೇಟಿ ಭಾರತ ಮತ್ತು ಇಂಡೋನೇಷಿಯಾ ದೇಶಗಳ ನಡುವಿನ ಪ್ರಬಲ ಬಾಂಧವ್ಯವನ್ನು ಸೂಚಿಸಿತು.  ಇದು ಪರಸ್ಪರ ದೇಶಗಳ ನಡುವಿನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಬಾಂಧವ್ಯಗಳನ್ನು ಸೂಚಿಸುತ್ತದೆ.

ಈ ಭೇಟಿ ವಾಣಿಜ್ಯ, ರಕ್ಷಣಾ ಸಹಕಾರ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಟದಂತಹ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು. ಏಷ್ಯಾದ ಆಂತರಿಕ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಉಭಯ ದೇಶಗಳ ನಡುವಿನ ಬದ್ಧತೆಯನ್ನು ಪ್ರತಿನಿಧಿಸಿತು. ಅಂದು ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಸಿದ್ಧರಾದ ಶ್ರೀ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಭಾರತದ ರಾಷ್ಟ್ರಪತಿಗಳಾಗಿದ್ದರೆ, ಅಜಾತಶತ್ರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದರು.

ಅಧ್ಯಕ್ಷ ಪ್ರಬೋವೋ ಸುಬಿಯಾಂತೋ (2025)

ಅಧ್ಯಕ್ಷ ಪ್ರಬೋವೋ ಸುಬಿಯಾಂತೋ

ಜನವರಿ 26, 2025 ರಂದು ನಡೆಯಲಿರುವ ಭಾರತದ ಗಣರಾಜ್ಯ ದಿನಾಚರಣೆಗೆ ಇಂಡೋನೇಷಿಯಾದ ಅಧ್ಯಕ್ಷ ಪ್ರಬೋವೋ ಸುಬಿಯಾಂತೋ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇವರು ಒಕ್ಟೋಬರ್ 2024 ನಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮತ್ತು ಅಧಿಕಾರ ಸ್ವೀಕರಿಸಿದ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ.

ಈ ಭೇಟಿ ಭಾರತ ಮತ್ತು ಇಂಡೋನೇಷಿಯಾ ನಡುವೆ ಇರುವ ಸಾಂಸ್ಕೃತಿಕ ಮತ್ತು ರಕ್ಷಣಾ ಸಂಬಂಧಗಳನ್ನು ಪ್ರೋತ್ಸಾಹಿಸುವುದಕ್ಕೆ ಮಹತ್ವಪೂರ್ಣವಾಗಿದೆ. ಗಣರಾಜ್ಯ ದಿನದಂದು ನಡೆಯುವ ಪೆರೇಡ್‌ನಲ್ಲಿ, ಇಂಡೋನೇಷಿಯಾದ 160 ಸದಸ್ಯರ ಮಾರ್ಚಿಂಗ್ ಕಂಟಿಂಜೆಂಟ್ ಮತ್ತು 190 ಸದಸ್ಯರ ಬ್ಯಾಂಡ್ ಕೂಡ ಭಾಗವಹಿಸಲಿದೆ. ಈ ಆಹ್ವಾನವು ಭಾರತ ಮತ್ತು ಇಂಡೋನೇಷಿಯಾ ನಡುವೆ ಇರುವ ಬಲವಾದ ಬಾಂಧವ್ಯ ಮತ್ತು ಪ್ರಾದೇಶಿಕ ಸಹಕಾರವನ್ನು ಪ್ರತಿಬಿಂಬಿಸುತ್ತದೆ.

ಇವುಗಳು ಭಾರತ ಮತ್ತು ಇಂಡೋನೇಷಿಯಾ ನಡುವಿನ ದೀರ್ಘಕಾಲಿಕ ಮತ್ತು ಶಕ್ತಿಶಾಲಿ ಸಂಬಂಧಗಳನ್ನು ಸೂಚಿಸುತ್ತವೆ, ಮತ್ತು ಎರಡು ರಾಷ್ಟ್ರಗಳ ಮಧ್ಯೆ ಬಲವಾದ ರಾಜಕೀಯ, ಆರ್ಥಿಕ ಹಾಗೂ ಭದ್ರತಾ ಸಂಬಂಧಗಳ ಪ್ರಬಲ ಮಾದರಿಯಾಗಿವೆ.

ಅಂತರಾಷ್ಟ್ರೀಯ