
ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಸುಳ್ಯ ಸರಕಾರಿ ಆಸ್ಪತ್ರೆ ಬಳಿಯಿಂದ ತಪ್ಪಿಸಿ ತೋಟ ಹಾರಿ ಪರಾರಿಯಾಗಿದ್ದ ದರೋಡೆ ಪ್ರಕರಣದ ಆರೋಪಿಯನ್ನು ಬಂದಿಸಲು ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.


ಆರೋಪಿಯ ಆರೋಗ್ಯ ತಪಾಸಣೆಗೆ ಸುಳ್ಯ ಆಸ್ಪತ್ರೆ ಕರೆದುಕೊಂಡು ಬಂದ ವೇಳೆ ಪೊಲೀಸರನ್ನು ತಳ್ಳಿ ತೋಟ ಹಾರಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಈತ ತಮಿಳುನಾಡು ಮೂಲದವನಾದುದರಿಂದ ಮತ್ತೆ ತಮಿಳುನಾಡು ಕಡೆಗೆ ಹೋಗಿರುವ ಸಂಶಯ ಪೋಲಿಸರಿಗೆ ವ್ಯಕ್ತವಾಗಿತ್ತು.ಇದರ ಬಗ್ಗೆ ಅನ್ವೇಷಣೆ ನಡೆಸಿದ ಪೊಲೀಸರು ಆತನನ್ನು ಸತ್ಯಮಂಗಲ ಪರಿಸರದಲ್ಲಿ ವಶಕ್ಕೆ ಪಡೆದು ಸುಳ್ಯಕ್ಕೆ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ..