
ಪಯಸ್ವಿನಿ ನದಿಯಲ್ಲಿ ಮರಳುಗಾರಿಕೆಗೆ ಗಣಿ ಇಲಾಖೆ ಅವಕಾಶ ನೀಡುತ್ತಿಲ್ಲ ಆದರೆ ಲಕ್ಷ ಪಡೆದು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಇದಕ್ಕೆ ಜನಪ್ರತಿನಿಧಿಗಳು ವಿವಿಧ ಇಲಾಖೆಗಳು ಕಂಡು ಕಾಣದಂತಿದ್ದಾರೆ, ಪಯಸ್ವಿನಿ ನದಿಯಲ್ಲಿ 2014 ರಿಂದ ಮರಳುಗಾರಿಕೆ ನಡೆಸಲು ಯಾರಿಗೂ ಪರವಾನಿಗೆ ನೀಡಿಲ್ಲ , ಪರವಾನಿಗೆ ನೀಡಬೇಕೆಂದರೆ 10000 ಮೆಟ್ರಿಕ್ ಟನ್ ಮರಳು ಒಂದು ಬ್ಲಾಕ್ ನಲ್ಲಿ ಸಿಗಬೇಕಾಗುತ್ತದೆ, ಆದರೆ ಗಣಿ ಅಧಿಕಾರಿಗಳು ಸರ್ವೆ ನಡೆಸಿದಾಗ ಅಷ್ಟು ಮರಳಿನ ಗಣಿ ಪತ್ತೆಯಾಗಿಲ್ಲ ಹಾಗೆ ಪರವಾನಿಗೆ ನೀಡಲಾಗುವುದಿಲ್ಲ ಎಂದಿದ್ದಾರೆ, 10000 ಮೆಟ್ರಿಕ್ ಟನ್ ಕಡಿಮೆ ಮರಳಿದ್ದರೆ ಅದನ್ನು ಪಂಚಾಯತ್ ಅಧೀನ ಬರುತ್ತಿತ್ತು ಹೊಸ ಮರಳು ನೀತಿಯಲ್ಲಿ ಟೆಂಡರ್ ಆಹ್ವಾನಿಸಬೇಕಿತ್ತು, ಅದನ್ನು ನಡೆಸದೆ ಗಣಿ ಇಲಾಖೆ ಅಧಿಕಾರಿಗಳು ಅಕ್ರಮ ಮರಳುಗಾರಿಕೆಯನ್ನು ಪೋಷಿಸುವಂತಿದೆ, ಈ ಬಗ್ಗೆ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ, ಹಿಂದೆ ಸರಕಾರ ನಮ್ಮದಲ್ಲ ಎನ್ನುತ್ತಿದ್ದರು ಈಗ ಅವರಿಗೆ ವೈಯುಕ್ತಿಕ ಇಚ್ಚಾ ಶಕ್ತಿ ಇಲ್ಲ ಈ ಬಗ್ಗೆ ಜ.16 ರಂದು ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮರಳು ಸಂಗ್ರಹಕಾರರ ಒಕ್ಕೂಟ ಆಗ್ರಹಿಸಿದೆ.



ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿದ ಒಕ್ಕ್ಕೂಟದ ಸದಸ್ಯ ಅನಿಲ್ ಪರಿವಾರಕಾನ ಮಾತನಾಡಿ ದಕ್ಷಿಣ ಕನ್ನಡದಲ್ಲಿ ಮರಳಿಗೆ ಯಾವುದೇ ರೀತಿಯ ಅಭಾವವಿಲ್ಲ ಆದರೆ ಕೃತಕ ಅಭಾವ ಸೃಷ್ಟಿಸಲಾಗಿದೆ, ಪ್ರತೀ ವರ್ಷ ನದಿ ಅಗಲಿಕರಣ ವಾಗುತ್ತಿದೆ , ಗುಂಡಿಗಳು ಮುಚ್ಚುತಿದೆ, ಕಲ್ಲುಗುಂಡಿಯಂತಹ ಕಡೆಗಳಲ್ಲಿ ಹೊಳೆಗಳು ದಿಕ್ಕು ಬದಲಿಸಿವೆ.ಹಾಗಾಗಿ ಗ್ರಾಮ ಪಂಚಾಯತ್ ನಿಂದ ಆಯಾ ವ್ಯಾಪ್ತಿಯಲ್ಲಿ ರಾಜಧನ ಪಡೆದು ಮರಳುಗಾರಿಕೆಗೆ ಅವಕಾಶ ನೀಡಬೇಕು, ಇದಕ್ಕೆ ಶಾಸಕರು, ಸಚಿವರು ಇಲಾಖೆಗಳಿಗೆ ಸ್ಪಷ್ಟ ಸೂಚನೆ ನೀಡ ಬೇಕು, ಕಲ್ಲುಗುಂಡಿಯಿಂದ ಆರಂಭವಾಗಿ ಹಲವು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು.ಎಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಜಿತ್ ಪೇರಾಲು, ಜಯರಾಮ ಭಾರದ್ವಾಜ್, ರಿಫಾಯಿ ಪೈಚಾರ್, ದಾಮೋದರ ನೀರ್ಪಾಡಿ, ತಾರನಾಥ ಕೊಡೆಂಚಿಕಾರ್ ಮೊದಲಾದವರಿದ್ದರು.
