
ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಕಾರ್ಯಕ್ರಮ ಜ.9 ರಂದು ಜಟ್ಟಿಪಳ್ಳ ಚೆನ್ನಕೇಶವ ದೇವರ ವಸಂತ ಕಟ್ಟೆ ವಠಾರದಲ್ಲಿ ನಡೆಯಿತು. ಬೆಳಿಗ್ಗೆ ೮ ಕ್ಕೆ ಗಣಪತಿ ಹವನದೊಂದಿಗೆ ಆರಂಭಗೊಂಡು,ಬೆಳಿಗ್ಗೆ ೯ ರಿಂದ ಸತ್ಯನಾರಾಯಣ ದೇವರ ಪೂಜೆ, ೧೧ ಗಂಟೆಯಿಂದ ಜಟ್ಟಿಪಳ್ಳದ ಭಾವನ ಸಂಗೀತ ಶಾಲೆಯವರಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.

೧೨ ಗಂಟೆಯಿಂದ ಮಹಾಪೂಜೆ , ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಸಂಜೆ ಗಂಟೆ ೭ ರಿಂದ ಸ್ಥಳೀಯ ಪ್ರತಿಭೆಗಳಿಂದ ಮತ್ತು ಸ್ಥಳಿಯ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆದು ರಾತ್ರಿ 9.30.ರಿಂದ ಸಭಾ ಕಾರ್ಯಕ್ರಮ ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಯಂ ಆರ್ ಆದ್ಯಕ್ಷತೆ ನಡೆಯಿತು,ನಗರ ಪಂಚಾಯತ್ ಅದ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಸುಳ್ಯ ಶಾಸಕ , ಬಂದರು ಮೀನುಗಾರಿಕೆ ,ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ, ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ,ದಕ್ಷಿಣ ವಲಯ ಅಂತರ್ ವಿಶ್ವ ವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್ ಆಟಗಾರ ಯಜ್ಞೇಶ್ ಕಾನತ್ತಿಲರನ್ನು ಸನ್ಮಾನಿಸಲಾಯಿತು,ಬ್ಯಾಂಕ್ ಆಫ್ ಬರೋಡದ ನಿವೃತ ಸೀನಿಯರ್ ಮ್ಯಾನೆಜರ್ ದಯಾನಂದ ಆಳ್ವ, ನಿವೃತ ದೈಹಿಕ ಶಿಕ್ಷಣ ಶಿಕ್ಷಕಿ ರಾಜೀವಿ ಶಿವರಾಮ, ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಡಾ. ಪುರುಷೋತ್ತಮ ಕೂಜುಗೋಡು ಸನ್ಮಾನವನ್ನು ನೆರವೇರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಅಂಗಾರರು ಕಷ್ಟದ ಅನುಭವವಿದ್ದಾಗ ಮಾತ್ರ ಜನರ ಆಶೋತ್ತರಗಳಿಗೆ ಉತ್ತಮ ರೀತಿಯಲ್ಲಿ ಸ್ಫಂದನೆ ಮಾಡಲು ಸಾದ್ಯವಾಗುತ್ತದೆ.ಮನುಷ್ಯನಲ್ಲಿ ತೋರ್ಪಡಿಕೆ ಭಯ ಭಕ್ತಿ ಇರಭಾರದು. ಪೂಜಾ ಕಾರ್ಯಗಳ ಮೂಲಕ ಧರ್ಮ ಉಳಿಸುವ ಬದ್ದತೆ ಇಂದಿನ ಕಾಲಘಟ್ಟದಲ್ಲಿ ಇರಬೇಕಾಗಿದೆ. ಹಿಂದೂ ಧರ್ಮದ ಮೇಲೆ ಹಲವು ರೀತಿಯ ದಾಳಿಗಳು ನಡೆಯುತ್ತಿವೆ, ಯುವ ಜನತೆ ಧರ್ಮರಕ್ಷಣೆಗೆ ಮುಂದಾಗಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಚೆನ್ನಕೇಶವ ಸ್ವ ಸಹಾಯ ಸಂಘ, ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ ಗಜಕೇಸರಿ ನಡುಬೈಲು ತಂಡವನ್ನು ಕಾರ್ಯಕ್ರಮಕ್ಕೆ ಅಲಂಕೃತ ದ್ವಾರ ನಿರ್ಮಾಣಕ್ಕಾಗಿ ಗೌರವಿಸಲಾಯಿತು. ಶ್ರೀರಾಮ ಭಜನಾ ಸೇವಾ ಸಂಘದ ಉಪಾದ್ಯಕ್ಷ ರಮಾನಂದ ರೈ ಜಟ್ಟಿಪಳ್ಳ ಸ್ವಾಗತಿಸಿದರು. ಶ್ರೀರಾಮ ಭಜನಾ ಸೇವಾ ಸಂಘದ ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ, ಕಾರ್ಯಕ್ರಮ ನಿರೂಪಿಸಿ ಶ್ರೀ ರಾಮ ಭಜನಾ ಮಂದಿರದ ಕೋಶಾಧಿಕಾರಿ ಸಂತೋಷ್ ಕುಮಾರ್ ವಂದಿಸಿದರು.
ರಾತ್ರಿ 9 ರಿಂದ ಕೆ ಆರ್ ಗೋಪಾಲಕೃಷ್ಣ ಬಳಗದವರಿಂದ “ಸಂಸಾರ ಸಂಸ್ಕಾರ” ನೂತನ ಶೈಲಿಯ ಗಾಯನ- ವಾಚನ ಕಾರ್ಯಕ್ರಮ ನಡೆಯಿತು.ರಾತ್ರಿ 12 ಘಂಟೆಯಿಂದ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ನಡೆಯಿತು.


