ಮಂಗಳೂರು : ಟ್ಯಾಂಕರ್‌ ವ್ಯವಹಾರ; ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಮಂಗಳೂರು : ಟ್ಯಾಂಕರ್‌ ವ್ಯವಹಾರ; ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಮಂಗಳೂರು: ಟ್ಯಾಂಕರ್‌ ವ್ಯವಹಾರಕ್ಕೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಡ್ಯಾರಿನ ಅಶೋಕ್‌ ಎ. ವಂಚಿಸಿರುವ ಬಗ್ಗೆ ಪ್ರವೀಣ್‌ ಕುತ್ತಾರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರವೀಣ್‌ ಅವರು ಅಶೋಕ್‌ ಜತೆ ಟ್ಯಾಂಕರ್‌ ವ್ಯವಹಾರ ಮಾಡುತ್ತಿದ್ದು, ಅವರ ಹೆಸರಿನಲ್ಲಿ 9 ಟ್ಯಾಂಕರ್‌ಗಳಿವೆ. ಅವರು ಕುತ್ತಾರಿನಲ್ಲಿ ಹೊಟೇಲ್‌ ನಡೆಸುತ್ತಿದ್ದುದರಿಂದ ಅವರ ಬ್ಯಾಂಕ್‌ ವ್ಯವಹಾರ, ಹೊಸ ಟ್ಯಾಂಕರ್‌ ಖರೀದಿ, ಹಳೇ ಟ್ಯಾಂಕರ್‌ ಮಾರಾಟ ಇತ್ಯಾದಿ ವ್ಯವಹಾರಗಳನ್ನು ಅಶೋಕ್‌ ನೋಡಿಕೊಳ್ಳುತ್ತಿದ್ದರು.

ತಣ್ಣೀರುಬಾವಿಯಲ್ಲಿರುವ ನಯಾರಾ ತೈಲ ಕಂಪೆನಿಯಲ್ಲಿರುವ ಪ್ರವೀಣ್‌ ಟ್ರಾನ್ಸ್‌ಪೋರ್ಟ್ ಕಂಪೆನಿಯ ಮೂಲಕ ಪ್ರವೀಣ್‌ ವ್ಯವಹಾರ ಮಾಡುತ್ತಿದ್ದು, ಇತ್ತೀಚೆಗೆ ಸುಮಾರು 2 ತಿಂಗಳ ಹಿಂದೆ ಅವರು 9 ಟ್ಯಾಂಕರ್‌ಗಳ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿ ಅಶೋಕ್‌ ಎ. 9 ಟ್ಯಾಂಕರ್‌ಗಳ ಎಲ್ಲ ದಾಖಲೆ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ನಕಲಿ ಸಹಿ ಹಾಕಿಸಿಕೊಂಡು ನೈಜ ದಾಖಲೆಗಳೆಂದು ಆರ್‌ಟಿಒ ಕಚೇರಿಗೆ ಹಾಜರುಪಡಿಸಿ ಅವರ ಪತ್ನಿ, ಮಕ್ಕಳು ಮತ್ತು ಸಂಬಂಧಿಕರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ನಯಾರಾ ತೈಲ ಕಂಪೆನಿಯಲ್ಲಿ ಪ್ರವೀಣ್‌ ಹೆಸರಿನಲ್ಲಿದ್ದ ಟ್ರಾನ್ಸ್‌ಪೋರ್ಟ್ ವ್ಯವಹಾರವನ್ನು ನಕಲಿ ಸಹಿ ಹಾಕಿಸಿಕೊಂಡು ಅವರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಆರೋಪಿ ಅಶೋಕ್‌ ಎ. ಅವರೊಂದಿಗೆ ನಯಾರ ತೈಲ ಕಂಪೆನಿಯ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯ