ಸುಳ್ಯ ಅರಂತೋಡಿನಲ್ಲಿ ಚಿರತೆ ಹಾವಳಿ ನಡುವೆ ಕಾಡಾನೆಯೂ ಪ್ರತ್ಯಕ್ಷ

ಸುಳ್ಯ ಅರಂತೋಡಿನಲ್ಲಿ ಚಿರತೆ ಹಾವಳಿ ನಡುವೆ ಕಾಡಾನೆಯೂ ಪ್ರತ್ಯಕ್ಷ

ಸುಳ್ಯ ತಾಲೂಕಿನ ಹಲವು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿರುವುದರ ಬಗ್ಗೆ ಆಗಾಗ ವರದಿಯಾಗುತ್ತಲೇ ಇದೆ.ಮೊನ್ನೆಯಷ್ಟೇ ಅರಂತೋಡು ಭಾಗದ ಅಡ್ಕಬಳೆ ಎಂಬಲ್ಲಿ ದನದ ಕರುವೊಂದನ್ನು ಚಿರತೆ ಬೇಟೆಯಾಡಿತ್ತು.ಇದು ಅಲ್ಲಿನ ಗ್ರಾಮಸ್ಥರಲ್ಲಿ ಆತಂಕವನ್ನೇ ಸೃಷ್ಟಿ ಮಾಡಿತ್ತು.

ಬಳಿಕ ಮರ್ಕಂಜ – ಮಡಪ್ಪಾಡಿ‌ ಭಾಗದ ಶೆಟ್ಟಿಮಜಲು ಎಂಬಲ್ಲಿ ಸಾಕು ನಾಯಿಗಳನ್ನು,ದನಗಳನ್ನು ಚಿರತೆ ಬೇಟೆಯಾಡಿರೋದು ಕೂಡ ಅಲ್ಲಿನ ಜನರ ನಿದ್ದೆಗೆಡಿಸುವಂತೆ ಮಾಡಿತ್ತು.ಇದೀಗ ಮತ್ತೆ ಅರಂತೋಡು ಗ್ರಾಮ ಕಿರ್ಲಾಯ ರಸ್ತೆಯಲ್ಲಿ ರಾತ್ರಿ ವೇಳೆ ಆನೆ ಸಂಚಾರ ಮಾಡಿರುವ ಬಗ್ಗೆ ವರದಿಯಾಗಿದ್ದು ಇದರಿಂದಾಗಿ ಆ ರಸ್ತೆಯಲ್ಲಿ ಸಂಚಾರ ಮಾಡುವ ಜನರು ಸಹಜವಾಗಿ ಭಯಭೀತರಾಗಿದ್ದಾರೆ.ಈ ಬಗ್ಗೆ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ