
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇದರ ಸಹಯೋಗದೊಂದಿಗೆ ವಲಯದ ಯುವಕ-ಯುವತಿ ಮಂಡಲಗಳ ಸಹಕಾರದೊಂದಿಗೆ ದಿನಾಂಕ 17.12.2023 ನೇ ಆದಿತ್ಯವಾರದಂದು ಅರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಂಗಣದಲ್ಲಿ *”ಯಶಸ್ಸು ಕನಸಲ್ಲ Success is not a Dream….”* ಎಂಬ ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಎ.ಎಮ್ ಇವರು ವಹಿಸಿದ್ದರು. ತರಬೇತಿ ಕಾರ್ಯಾಗಾರವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೇಶವ ಅಡ್ತಲೆ ಉದ್ಘಾಟಿಸಿದರು. ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಜೇ.ಸೀ.ಸೋಮಶೇಖರ ನೇರಳ, ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷರಾದ ಶ್ರೀ ಶೈಲೇಶ್ ಅಂಬೆಕಲ್ಲು, ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ವಿನಯ್ ಬೆದ್ರುಪಣೆ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಶ್ರೀ ಸುಬ್ರಮಣಿ ಪಿ.ವಿ ಹಾಗೂ ಶ್ರಿ ಲೋಹಿತ್ ಬಾಳಿಕಳ ಮತ್ತು ವಲಯದ ಯುವಕ ಮಂಡಲಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ವಿನಯ್ ಬೆದ್ರುಪಣೆ ಸ್ವಾಗತಿಸಿ ಶ್ರೀ ಲೋಹಿತ್ ಬಾಳಿಕಳ ಇವರು ವಂದಿಸಿದರು.

ಸ್ಪಂದನ ಬಳಗದ ಶ್ರೀ ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಶ್ರೀ ವಿಜೇಶ್ ಹಿರಿಯಡ್ಕ ಮತ್ತು ಸ್ಪಂದನ ಬಳಗದ ಸಲಹೆಗಾರರಾದ ಭವಾನಿಶಂಕರ ಅಡ್ತಲೆ ಸಭೆಯಲ್ಲಿ ಹಾಜರಿದ್ದರು.ನಂತರ ಜೆ.ಸಿ.ಐ ಭಾರತ ಇದರ ವಲಯ ತರಬೇತುದಾರರಾದ ಜೇ.ಸೀ ಸೋಮಶೇಖರ ನೇರಳ ಇವರಿಂದ “ಯಶಸ್ಸು ಕನಸಲ್ಲ Success is not a dream…” ವಿಷಯದ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು. ಮತ್ತು ಭಾರತ ಸರಕಾರದ ಅಯುಷ್ಮಾನ್ ಭಾರತ್ ಯೋಜನೆಯ ನೋಂದಣಿ ಕುರಿತಾದ ತರಬೇತಿಯನ್ನು ಮುರಳಿ ನಳಿಯಾರ್ ಇವರು ನಡೆಸಿಕೊಟ್ಟರು ಅಭಿಷೇಕ್ ಇವರು ಸಹಕರಿಸಿದರು. ವಲಯದ ಎಲ್ಲಾ ಯುವಕ ಯುವತಿ ಮಂಡಲಗಳ ಸದಸ್ಯರು ತರಬೇತಿ ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.

