ಮರ್ಕಂಜದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ ಆತಂಕದಲ್ಲಿ ಗ್ರಾಮಸ್ಥರು.

ಮರ್ಕಂಜದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ ಆತಂಕದಲ್ಲಿ ಗ್ರಾಮಸ್ಥರು.

ದೊಡ್ಡತೋಟ ಮರ್ಕಂಜ ರಸ್ತೆಯ ಕೊರತ್ತೋಡಿಯಲ್ಲಿ ರಿಕ್ಷಾ ಚಾಲಕನಿಗೆ ಚಿರತೆಯೊಂದು ಕಾಣಸಿಕ್ಕಿರುವಬಗ್ಗೆ ವರದಿಯಾಗಿದೆ. ದೊಡ್ಡತೋಟದಲ್ಲಿ ರಿಕ್ಷಾ ಚಾಲಕರಾಗಿರುವ ಗಂಗಾಧರ ಅವರಿಗೆ ಕೊರತ್ತೋಡಿ ಬಳಿಯ ಕಾಡಿನಿಂದ ಚಿರತೆಯೊಂದು ರಸ್ತೆ ದಾಟಿ ಬೊಳ್ಳಾಜೆ ಕಡೆಯ ಕಾಡಿಗೆ ಹೋಗಿದೆ ಎನ್ನಲಾಗಿದೆ. ಇದೀಗ ಚಿರತೆ ಕಾಣಸಿಕ್ಕಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮರ್ಕಂಜದ ಕಟ್ಟಕ್ಕೋಡಿ ಚೀಮಾಡು ಪರಿಸರದಲ್ಲಿ ವಾರದ ಹಿಂದೆ ಚಿರತೆ ಕರುವನ್ನು ಹೊತ್ತೊಯ್ಯಿದ್ದಿತ್ತು.

ರಾಜ್ಯ