ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LoC) ಬಳಿ ಗಡಿಪ್ರದೇಶದ ಗಸ್ತು ಸಮಯದಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ 7ನೇ ಜೆಎಟಿ ರೆಜಿಮೆಂಟ್ನ ಅಗ್ನಿವೀರ ಲಲಿತ್ ಕುಮಾರ್ ಹುತಾತ್ಮರಾಗಿದ್ದಾರೆ. ಈ ದುರಂತದಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ದುರ್ಘಟನೆ ಕೃಷ್ಣಾ ಘಾಟಿ ಸೆಕ್ಟರ್ನಲ್ಲಿ ನಿಯಮಿತ ಗಸ್ತು ಕಾರ್ಯಾಚರಣೆ ವೇಳೆ ಸಂಭವಿಸಿದೆ. ಭಾರತೀಯ ಸೇನೆ ಶೋಕ ವ್ಯಕ್ತಪಡಿಸಿ, ಹುತಾತ್ಮ ಸೈನಿಕನಿಗೆ ಗೌರವ ಸಲ್ಲಿಸಿದೆ ಹಾಗೂ ಅವರ ಕುಟುಂಬಕ್ಕೆ ಸಂಪೂರ್ಣ ಸಹಾಯ ನೀಡುವ ಭರವಸೆ ನೀಡಿದೆ.