ದಿನಾಂಕ 4-4-2025ರ ಶುಕ್ರವಾರದಂದು ಗೌಡ ಗ್ರಾಮಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಕಾಯಿಂಗಾಜೆ ಅಧ್ಯಕ್ಷತೆಯಲ್ಲಿ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಭಾಭವನದಲ್ಲಿ ಅರಂಬೂರು ಗೌಡ ಉಪಸಮಿತಿಯ ಸಭೆ ನಡೆಯಿತು.


ವೇದಿಕೆಯಲ್ಲಿ ಅರಂತೋಡು ವಲಯದ ಉಸ್ತುವಾರಿ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ಯತಿರಾಜ ಭೂತಕಲ್ಲು, ತಾಲ್ಲೂಕು ಸಮಿತಿಯ ನಿರ್ದೇಶಕರಾದ ಜಗದೀಶ ಸರಳಿಕುಂಜ,ಹಿರಿಯರಾದ ನೆಡ್ಚಿಲ್ ಉಕ್ರಪ್ಪ ಗೌಡ, ಸಲಹಾ ಸಮಿತಿಯ ಸದಸ್ಯೆ ಶ್ರೀಮತಿ ಹರಾವತಿ ಕುಡೆಕಲ್ಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೌಡ ಉಪಸಮಿತಿಯನ್ನು ರಚಿಸಲಾಯಿತು ಪುರುಷ ಸಮಿತಿಯ ಅಧ್ಯಕ್ಷರಾಗಿ ಅರಂಬೂರು ಮನೋಹರ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಕೆದಂಬಾಡಿ, ಪ್ರದಾನ ಕಾರ್ಯದರ್ಶಿಯಾಗಿ ನೆಡ್ಚಿಲ್ ಗಂಗಾಧರ ಎಸ್, ಜೊತೆ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಪಡ್ಫು ಮತ್ತು ಸದಸ್ಯರುಗಳಾಗಿ ಸುಧಾಕರ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್ ಬದಿಕಾನ , ಉದಯಕುಮಾರ್ ಕುಮಾರಪ್ರಭ ದೀಕ್ಷಿತ್ ಪಾಲಡ್ಕ , ತೇಜಸ್ ಚಿದ್ಗಲ್, ಜಯಶಂಕರ ಪಡ್ಫು, ಶಿವಪ್ರಸಾದ್ ಪರಿವಾರ , ಗುರುಪ್ರಸಾದ್ ಕುಡೆಕಲ್ಲು, ಹಾಗು ಗೌರವ ಸಲಹೆಗಾರರಾಗಿ ಎ ಸಿ ವಸಂತ, ಚಂದ್ರಶೇಖರ ನೆಡ್ಚಿಲ್ ಪದ್ಮಯ ಪಡ್ಫು ಇವರುಗಳನ್ನು ಆಯ್ಕೆಮಾಡಲಾಯಿತು.
ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಡಾ. ಅನುರಾಧ ಕುರುಂಜಿ, ಉಪಾಧ್ಯಕ್ಷರಾಗಿ ರಾಜೀವಿ ಅರಂಬೂರು, ಪ್ರದಾನ ಕಾರ್ಯದರ್ಶಿಯಾಗಿ ವೇದಾವತಿ ನೆಡ್ಚಿಲ್ , ಜೊತೆ ಕಾರ್ಯದರ್ಶಿಯಾಗಿ ಕವಿತಾ ಕುಡೆಕಲ್ಲು, ಸದಸ್ಯರುಗಳಾಗಿ ಚಂದ್ರಾವತಿ ಬದಿಕಾನ, ಸವಿತಾ ಸರಳಿಕುಂಜ, ಗಾಯತ್ರಿ ನೆಡ್ಚಿಲ್ , ಪುಷ್ಪಾವತಿ ಕುಡೆಕಲ್ಲು , ಸುಮನಾ ನೆಡ್ಚಿಲ್ , ಹಾಗು ಗೌರವ ಸಲಹೆಗಾರರಾಗಿ ಹರಾವತಿ ಕುಡೆಕಲ್ಲು, ಉಷಾ ಚಂದ್ರಶೇಖರ ಸರಳಿಕುಂಜ ಇವರುಗಳನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ಆಲೆಟ್ಟಿ ಗ್ರಾಮದ ಗೌಡ ಸಮಿತಿಯ ಮುಂದಿನ ಕಾರ್ಯ ಯೋಜನೆ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಸುಮಾರು 60 ಕ್ಕೂ ಹೆಚ್ಚು ಮಂದಿ ಗೌಡ ಸ್ವಜಾತಿ ಬಂಧುಗಳು ಭಾಗವಸಿದರು. ಆಲೆಟ್ಟಿ ಗ್ರಾಮ ಸಮಿತಿಯ ಕಾರ್ಯದರ್ಶಿ ಅಶೋಕ್ ಪೀಚೆ ಕಲ್ಚರ್ಪೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.