ಕಾಡುಪ್ರಾಣಿ ಬೇಟೆ ಯತ್ನ: ಇಬ್ಬರ ಬಂಧನ

ಕಾಡುಪ್ರಾಣಿ ಬೇಟೆ ಯತ್ನ: ಇಬ್ಬರ ಬಂಧನ

ಕಾರ್ಕಳ: ಇಲ್ಲಿನ ಕುದುರೆಮುಖ ವನ್ಯಜೀವಿ ವಲಯದ ನೂರಾಲ್‌ಬೆಟ್ಟು ಗ್ರಾಮದ ಮೂಲಿಕಾರಪ್ಪ ಎಂಬಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಇಬ್ಬರನ್ನು ಕಾರ್ಕಳ ವನ್ಯಜೀವಿ ವಲಯದ ಸಿಬ್ಬಂದಿ ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಪ್ರಶಾಂತ್‌ ಪೂಜಾರಿ, ಅಶೋಕ್‌ ಪೂಜಾರಿ ಬಂಧಿತರು. ಅವರಿಂದ ಬಂದೂಕು, 21 ಕಾಡತೂಸು, ಸರ್ಚ್‌ಲೈಟ್, 2 ಮೊಬೈಲ್ ಫೋನ್, ಆರೋಪಿಗಳು ಬಳಸಿದ್ದ ಕಾರು, ಆಟೊರಿಕ್ಷಾ ವಶಕ್ಕೆ ಪಡೆಕೊಳ್ಳಲಾಗಿದೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ನಿರ್ದೇಶನದಂತೆ, ಕುದುರೆಮುಖ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್. ಮಾರ್ಗದರ್ಶನದಲ್ಲಿ ಕಾರ್ಕಳ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಶಶಿಧರ ಗೌಡ ಪಾಟೀಲ್ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರಾಜು ಎಲ್.ಜೆ., ಅಭಿಲಾಷ್ ಎಸ್‌.ಬಿ., ಗಸ್ತು ಅರಣ್ಯ ಪಾಲಕರಾದ ಪಕೀರಪ್ಪ, ಮಲ್ಲಯ್ಯ, ಬೇಟೆ ನಿಯಂತ್ರಣ ಕಾವಲುಗಾರರಾದ ಹರೀಶ್ ಎಂ., ನಿತಿನ್, ಅಜಿತ್, ವಾಹನ ಚಾಲಕರಾದ ದಾಮೋದರ, ನಿತಿನ್ ಜೆ.ಹೆಡ್ಡೆ ಭಾಗವಹಿಸಿದ್ದರು.

ರಾಜ್ಯ