
ಪುತ್ತೂರು :ಗ್ಯಾಂಗ್ನಲ್ಲಿ ನಾಲ್ವರು ಇದ್ದರು


ನಾನು ಕಿಟಕಿಯ ಮೂಲಕ ಅವರ ಫೋಟೋ
ತೆಗೆದಿದ್ದೇನೆ ಎಂದೇಳಿಕೊಂಡು
ಮಹಿಳೆಯೋರ್ವರು ಆ ಫೋಟೋವನ್ನು
ವೈರಲ್ ಮಾಡುವ ಕುಖ್ಯಾತ ಚಡ್ಡಿ ಗ್ಯಾಂಗ್
ದರೋಡೆಕೋರರೇ ಬಂದಿದ್ದಾರೆ ಎನ್ನುವ ಹಾಗೆ
ಕಥೆ ಕಟ್ಟಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ
ಕೆಯ್ಯರಿನಲ್ಲಿ ನ.6ರಂದು ನಡೆದಿದೆ. ಸ್ಥಳಕ್ಕೆ
ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್
ರವಿ.ಬಿ.ಎಸ್.ರವರು ಮಹಿಳೆಯ ಮೊಬೈಲ್
ಫೋನ್ ಪರಿಶೀಲಿಸಿದಾಗ ಇದೊಂದು ಕಟ್ಟು ಕಥೆ
ಆಗಿದ್ದು ಮಹಿಳೆ ಕಳಿಸಿದ ಫೋಟೋಗಳು 2
ವರ್ಷಗಳ ಹಿಂದೆ ಮಳೆಯಾಲಂನ
ಮನೋರಮಾ ನ್ಯೂಸ್ನಲ್ಲಿ ಪ್ರಸಾರಗೊಂಡ
ಕೊಟ್ಟಾಯಂನಲ್ಲಿ ನಡೆದ ಒಂದು ಸ್ಟೋರಿಯಲ್ಲಿ
ಬರುವ ಫೋಟೋಗಳಾಗಿವೆ ಎಂಬುದನ್ನು ಪತ್ತೆ
ಹಚ್ಚಿದ್ದಾರೆ. ಡಿವೈಎಸ್ಪಿ ಅರುಣ್ ನಾಗೇಗೌಡ,
ಸಂಪ್ಯ ಠಾಣಾ ತನಿಖಾ ವಿಭಾಗದ ಎಎಸ್ಐ
ಸುಷ್ಮಾ ಭಂಡಾರಿ ಹಾಗೂ ಸಿಬ್ಬಂದಿಗಳು ಬಂದು
ಪರಿಶೀಲನೆ ನಡೆಸಿದ್ದಾರೆ.ಮೊದಲಿಗೆ ಮಹಿಳೆ ಮನೆ ಮಾಲಿಕರಿಗೆ ಪೋಟೊ ಕಳಿಸಿದ್ದು ಬಳಿಕ ವೈರಲ್ ಆಗಿದೆ.

ಚಡ್ಡಿ ಗ್ಯಾಂಗ್ನ ಕಥೆ ಕಟ್ಟಿದ ಮಾರ್ಗರೇಟ್
ಎಂಬವರು ಮೂಲತಃ ಕೇರಳ
ಮೂಲದವರಾಗಿದ್ದಾರೆ. ಇವರು ತನ್ನ ಗಂಡ
ಸೈಂಟ್ ಜಾರ್ಜ್ ಹಾಗೂ ಮಗುವಿನೊಂದಿಗೆ
ಕೆಯ್ಯರು ಗ್ರಾಮದ ಸಣಂಗಳದಲ್ಲಿ ಬಾಡಿಗೆ
ಮನೆಯಲ್ಲಿ ವಾಸವಿದ್ದಾರೆ. ಜಾರ್ಜ್ರವರು
ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಹಾಲು
ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.
ಮಾರ್ಗರೇಟ್ರವರ ಮೊಬೈಲ್ ಫೋನ್
ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವರು
ಯೂಟ್ಯೂಬ್ ಹೆಚ್ಚಾಗಿ ನೋಡುತ್ತಿರುವುದು
ಅದರಲ್ಲೂ ಕೈಂಗೆ ಸಂಬಂಧಿಸಿದ
ವಿಡಿಯೋಗಳನ್ನೆ ಹೆಚ್ಚಾಗಿ ನೋಡುತ್ತಿರುವುದು
ತಿಳಿದುಬಂದಿದೆ. ಚಡ್ಡಿ ಗ್ಯಾಂಗ್ನ ಕಥೆಯೂ
ಇದೇ ರೀತಿ ಆಗಿದ್ದು ಮಳೆಯಾಲಂನ
ಮನೋರಮಾ ನ್ಯೂಸ್ನಲ್ಲಿ 2 ವರ್ಷಗಳ ಹಿಂದೆ
ಪ್ರಸಾರಗೊಂಡ ವೀಡಿಯೋ
ಸ್ಟೋರಿಯೊಂದರಲ್ಲಿ ಬರುವ ದೃಶ್ಯಗಳಿಂದ ಈ
ಫೋಟೋಗಳನ್ನು ಸ್ಟೀನ್ಶಾಟ್ ಮೂಲಕ
ತೆಗೆದಿದ್ದಾರೆ. ಆ ಫೋಟೋವನ್ನು ಮೊದಲಿಗೆ
ಮನೆಯ ಓನರ್ಗೆ ಕಳುಹಿಸಿ ಮನೆಗೆ ಚಡ್ಡಿ ಗ್ಯಾಂಗ್ ಬಂದಿದ್ದಾರೆ ಕಥೆ ಕಟ್ಟಿದ್ದಾರೆ.ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್
ರವಿ.ಬಿ.ಎಸ್.ರವರು ಮೊದಲಿಗೆ ಮಹಿಳೆಯ
ಮೊಬೈಲ್ ಪಡೆದುಕೊಂಡು ಪರಿಶೀಲನೆ
ನಡೆಸಿದರು. ಈ ವೇಳೆ ಮಹಿಳೆ ಶೇರ್
ಮಾಡಿಕೊಂಡ ಫೋಟೋಗಳು ಅಸಲಿ ಅಲ್ಲ
ಎಂಬುದು ತಿಳಿದು ಬಂದಿದೆ. ಇದೊಂದು
ಸಂಪೂರ್ಣ ಕಟ್ಟು ಕಥೆ ಆಗಿದ್ದು, ಮಹಿಳೆ
ಹಂಚಿಕೊಂಡ ಫೋಟೋಗಳು
ಕೊಟ್ಟಾಯಂನಲ್ಲಿ ನಡೆದ ಒಂದು ವೀಡಿಯೋ
ಸ್ಟೋರಿಯ ಫೋಟೋಗಳಾಗಿವೆ. ಕೆಯ್ಯರು
ಸಣಂಗಳಕ್ಕೆ ಚಡ್ಡಿ ಗ್ಯಾಂಗ್ನ
ದರೋಡೆಕೋರರು ಬಂದಿಲ್ಲ. ಯಾರೂ
ಭಯಪಡುವ ಅಗತ್ಯವಿಲ್ಲ ಎಂದು ಸರ್ಕಲ್
ಇನ್ಸ್ಪೆಕ್ಟರ್ ರವಿ.ಬಿ.ಎಸ್. ಮಾಧ್ಯಮಕ್ಕೆ
ತಿಳಿಸಿದ್ದಾರೆ.