ಸುಳ್ಯದಲ್ಲಿ ಕಾಂಗ್ರೆಸ್ ರೋಡ್ ಶೋ- ಅಭ್ಯರ್ಥಿ ಜಿ.ಕೃಷ್ಣಪ್ಪ ಅವರಿಂದ ಮತ ಯಾಚನೆ:ನಿದ್ದೆ ಬಿಟ್ಟು ಮನೆ ಮನೆ ಗ್ಯಾರಂಟಿ ಕಾರ್ಡ್ ತಲುಪಿಸಿ-ನಿಕೇತ್‌ರಾಜ್ ಮೌರ್ಯ

ಸುಳ್ಯದಲ್ಲಿ ಕಾಂಗ್ರೆಸ್ ರೋಡ್ ಶೋ- ಅಭ್ಯರ್ಥಿ ಜಿ.ಕೃಷ್ಣಪ್ಪ ಅವರಿಂದ ಮತ ಯಾಚನೆ:
ನಿದ್ದೆ ಬಿಟ್ಟು ಮನೆ ಮನೆ ಗ್ಯಾರಂಟಿ ಕಾರ್ಡ್ ತಲುಪಿಸಿ-ನಿಕೇತ್‌ರಾಜ್ ಮೌರ್ಯ

ಚುನಾವಣೆಯ ಬಹಿರಂಗ ಪ್ರಚಾರಕ್ಕೆನಿನ್ನೆ ತೆರೆ ಬಿದ್ದಿದೆ ಮೇ 8 ರಂದು ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಬೃಹತ್ ರೋಡ್ ಶೋ‌ ಮೂಲಕ ಪ್ರಚಾರ ಕೈಗೊಂಡರು‌. ತೆರೆದ ವಾಹನದಲ್ಲಿ ಸಂಚರಿಸಿ ಸಾರ್ವಜನಿರಲ್ಲಿ ಮತ ಯಾಚನೆ ಮಾಡಿದರು.ಸುಳ್ಯ ನಗರದ ಗಾಂಧಿನಗರದಿಂದ ಆರಂಭಗೊಂಡ ಪಾದಯಾತ್ರೆಗೆ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಕೋರೊನಾ ಬಂದಾಗ, ಜಲಪ್ರಳಯ ಉಂಟಾದಾಗ ಜನರ ಕಷ್ಟ ಕೇಳಲು ಬಾರದ ಪ್ರದಾನಿಯವರನ್ನು ಇಂದು ಚುನಾವಣೆಯ ಸಂದರ್ಭ ರಾಜ್ಯದ ಗಲ್ಲಿ ಗಲ್ಲಿಯಲ್ಲಿ ತಿರುಗಾಡುವಂತೆ ಮಾಡಿದಿದ್ರೆ ಅದು ಕಾಂಗ್ರೇಸ್ , ಇನೆರಡು ದಿನ ನಿದ್ರೆ ಬಿಟ್ಟು ಗ್ಯಾರಂಟಿ ಕಾರ್ಡ್ ಮನೆ ಮನೆ ತಲುಪಿಸಿ ಎಂದು ಕಾಂಗ್ರೇಸ್ ಕಾರ್ಯಕರ್ತರಿಗೆ ಕರೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬರುವುದು ನಿಶ್ಚಯವಾಗಿದೆ ಎಂದು ಅವರು ಹೇಳಿದರು.


ಗಾಂಧಿನಗರದಿಂದ ಹಳೆಗೇಟು ತನಕ ತನಕ ರೋಡ್ ಶೋ ಮೂಲಕ ಪ್ರಚಾರ ಮಾಡಲಾಯಿತು. ಕಾರ್ಯಕರ್ತರು ಹಾಗೂ ಮುಖಂಡರು ಮನವಿ ಪತ್ರ, ಅಭ್ಯರ್ಥಿ ಪರಿಚಯ ಪ್ರಣಾಳಿಕೆ ಪ್ರತಿಗಳನ್ನು ಅಂಗಡಿ ಮುಂಗಟ್ಟುಗಳಿಗೆ ನೀಡಿ ಮತ ಯಾಚನೆ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ,ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ‌ ಮಾವಜಿ, ಕಾಂಗ್ರೆಸ್ ಉಸ್ತುವಾರಿ ಎಂ.ವೆಂಕಪ್ಪ ಗೌಡ, ಎಸ್.ಸಂಶುದ್ದೀನ್, ಸರಸ್ವತಿ ಕಾಮತ್, ಕೆ.ಎಂ.ಮುಸ್ತಫ, ರಾಜೀವಿ ಆರ್.ರೈ, ಸೋಮಶೇಖರ ಕೊಯಿಂಗಾಜೆ, ವಹಿದಾ ಇಸ್ಮಾಯಿಲ್, ಮಹಮ್ಮದ್ ಕುಂಞಿ ಗೂನಡ್ಕ, ಅಬುಸಾಲಿ, ಶ್ರೀ ಹರಿ ಕುಕ್ಕುಡೇಲು, ಶಾಫಿ ಕುತ್ತಮೊಟ್ಟೆ, ಶರೀಪ್ ಕಂಠಿ,ಮೊದಲಾದವರಿದ್ದರು.

ರಾಜ್ಯ