ತಾಯಿಯನ್ನು ನೆನೆದು ಮಮ್ಮಲ ಮರುಗಿ ಸಾವನ್ನಪ್ಪಿತೇ..ಮರಿಯಾನೆ..

ತಾಯಿಯನ್ನು ನೆನೆದು ಮಮ್ಮಲ ಮರುಗಿ ಸಾವನ್ನಪ್ಪಿತೇ..ಮರಿಯಾನೆ..

ಅಜ್ಜಾವರ ಕಾಡಿನಿಂದ ನಾಡಿಗೆ ಬಂದು ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಮೇಲೆ ಬಂದ ನಂತರ ಹಿಂಡಿನಿಂದ ಬೇರ್ಪಟ್ಟಿದ್ದರಿಂದ ದುಬಾರೆಯ ಆನೆ
ಶಿಬಿರಕ್ಕೆ ಕಳುಹಿಸಲ್ಪಟ್ಟ ಮರಿಯಾನೆ ಅಲ್ಲಿ ವಾರದ ಹಿಂದೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಎಪ್ರಿಲ್ 13 ರಂದು ನಾಲ್ಕು ಆನೆಗಳು ಅಜ್ಜಾವರ ತುದಿಯಡ್ಕದ
ಸಂಪತ್ ರೈ ಯವರ ತೋಟದ ಕೆರೆಗೆ ಬಿದ್ದಿದ್ದವು. ಜನರು ಕೆರೆಯ ದಡ ಅಗೆದು ಆನೆ ಮೇಲೆ ಹತ್ತುವಂತೆ ಮಾಡಿದ ಬಳಿಕ ಮೂರು ಆನೆಗಳು ಸುಲಭದಲ್ಲಿ ಮೇಲೆ ಬಂದಿದ್ದವು. ಒಂದು ಮರಿಯಾನೆ ಮಾತ್ರ ಮೇಲೆ ಬರಲಾಗದೆ ಜಾರಿ ಬಿದ್ದುದರಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಅದನ್ನು ದೂಡಿ
ಮೇಲಕ್ಕೆ ಹತ್ತಿಸಿದ್ದರು. ಆ ವೇಳೆಗೆ ಆನೆಗಳ ಹಿಂಡು ಮುಂದಕ್ಕೆ ಹೋಗಿದ್ದುದರಿಂದ ಈ ಮರಿಯಾನೆಗೆ ಗುಂಪು ಸೇರಲಾಗಿರಲಿಲ್ಲ. ಮರುದಿನ ಗುಂಪಿಗೆ ಸೇರಿಸಲು ಯತ್ನಿಸಿದರೂ ಮರಿಯಾನೆ ವಾಪಸ್ ಬಂದಿತ್ತು ಬಳಿಕ ಆನೆ ತಜ್ಞರ ಅಭಿಪ್ರಾಯ ದ ಮೇರೆಗೆ ದುಬಾರೆ ಆನೆ ಶಿಬಿರದಿಂದ ತಜ್ಞರು ಬಂದು ಎ.16 ರಂದು ದುಬಾರೆ ಆನೆ ಶಿಬಿರಕ್ಕೆ ಅದನ್ನು ಕೊಂಡೊಯ್ಯಲಾಗಿತ್ತು.
ಶಿಬಿರದಲ್ಲಿ ಈ ಮರಿಯಾನೆಯು ಚುರುಕಾಗಿದ್ದು ಹಾಲು
ಸೇವಿಸುತ್ತಿತ್ತು. ಇತರ ಆನೆ ಮರಿಗಳೊಂದಿಗೆ ಕೂಡಿನಲಿಯುತ್ತಿತ್ತೆನ್ನಲಾಗಿದೆ. ಆದರೆ ವಾರದ ಹಿಂದೆ ದಿಢೀರನೆ ಆನೆ ಮರಿ ಸಾವನ್ನಪ್ಪಿದೆ. ಈ ದಿಢೀರ್ ಸಾವಿಗೆ
ಕಾರಣವೇನೆಂದು ತಿಳಿದುಬಂದಿಲ್ಲ.

ರಾಜ್ಯ