
ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸುಳ್ಯ ನಗರದಲ್ಲಿ ರೋಡ್ ಶೋ ನಡೆಸಿದರು,



ಪಾದಯಾತ್ರೆಯ ಮೂಲಕ ನಗರದಾದ್ಯಂತ ಸಂಚರಿಸಿ ಮತ ಯಾಚನೆ ನಡೆಸಿದರು. ಸುಳ್ಯ ಜ್ಯೋತಿ ವೃತ್ತದಿಂದ ಆರಂಭಗೊಂಡ ಪಾದಯಾತ್ರೆ ಗಾಂಧಿನಗರ ತನಕ ನಡೆದುಬಂತು. ನಗರದ ವರ್ತಕರಲ್ಲಿ ಬಿಜೆಪಿ ಗೆ ಮತ ನೀಡುವಂತೆ ಮತ ಯಾಚನೆ ಮಾಡಿದರು. ಚನಿಯ ಕಲ್ತಡ್ಕ, ಬಾಲಗೋಪಾಲ,ಶೀನ ಬಯಂಬು ಜಗದೀಶ ಸೇರ್ಕಜೆ, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಗೋಪಾಲ ನಡುಬೈಲು ಮಹೇಶ್ ಕುಮಾರ್ ಮೇನಾಲ, ಕುಸುಮಾಧರ ಎ.ಟಿ, ಪಿ.ಕೆ.ಉಮೇಶ್, ಚಿದಾನಂದ ಕುದ್ಪಾಜೆ, ಗಿರೀಶ್ ಕಲ್ಲುಗದ್ದೆ, ಜಗದೀಶ್, ಸೇರಿದಂತೆ ಹಲವಾರು ಮಂದಿಯಿದ್ದರು.
