

ನೆಲ್ಲೂರುಕೆಮ್ರಾಜೆ ಗ್ರಾಮದ ದಾಸನಕಜೆ ಮತ್ತು ನಾರ್ಣಕಜೆಯಲ್ಲಿ ದಿನಗಳ ಅಂತರದಲ್ಲಿ ಇಬ್ಬರು ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಎ. 10 ಮತ್ತ ಎ. 11 ರಂದು ನಡೆದಿದೆ.
ಎ.10 ಮದ್ಯಾಹ್ನ ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ದಿ| ಶಿವರಾಮ ಮಣಿಯಾಣಿಯವರ ಪುತ್ರ ಸತೀಶ ಮಣಿಯಾಣಿ ಎಲಿಮಲೆಯಲ್ಲಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟರೆ, ಎ.11 ರ ಬೆಳಿಗ್ಗೆ 10 ಘಂಟೆ ಸುಮಾರಿಗೆ ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆಯ ಹರೀಶ ಎಂಬ ಯುವಕ ಬೊಳ್ಳಾಜೆ ಎಂಬಲ್ಲಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿದ್ದಾರೆ.



ಹರೀಶ್ ಎ. 11 ರ ಬೆಳಿಗ್ಗೆ ನೆಲ್ಲೂರು ಕೆಮ್ರಾಜೆಯ ಬೊಳ್ಳಾಜೆ ಬಳಿಯ ಕಂದೂರು ಸಚಿನ್ ಕೆ ಎಸ್ ಎಂಬವರ ಜಾಗದಲ್ಲಿ ತೆಂಗಿನ ತೆಗೆಯಲು ಈ ಜಾಗವನ್ನು ನೋಡಿಕೊಳ್ಳುತ್ತಿದ್ದ ಮನಮೋಹನ ಕೆ ಎಂಬವರು ತೆಂಗಿನ ಕಾಯಿ ತೆಗೆಯಲು ಇಬ್ಬರನ್ನು ಕರೆಸಿಕೊಂಡಿದ್ದರೆನ್ನಲಾಗಿದೆ. ಮಧ್ಯಾಹ್ನದ
ಸುಮಾರಿಗೆ ಹರೀಶರವರು ತೆಂಗಿನ ಮರದಿಂದ ಕಾಯಿ
ಕಿತ್ತು ಇಳಿಯುತ್ತಿದ್ದಾಗ ಸ್ಮೃತಿ ತಪ್ಪಿ ಕೆಳಗೆ ಬಿದ್ದರೆನ್ನಲಾಗಿದೆ. ಕೂಡಲೇ ಅಲ್ಲಿ ಇದ್ದವರು ಅಸ್ಪತ್ರೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟರೆನ್ನಲಾಗಿದೆ.
ಮೃತರು ಪತ್ನಿ ಎರಡು ಮಕ್ಕಳು ತಾಯಿ ಮತ್ತು ಸಹೋದರ ಸತೀಶ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.
ಸತೀಶ ಮಣಿಯಾಣಿರವರು ಎ.10 ರ ಬೆಳಿಗ್ಗೆ ಎಂದಿನಂತೆ ದೇವಚಳ್ಳ ಗ್ರಾಮದ ಅಂಬೆಕಲ್ಲು ತೀರ್ಥರಾಮರವರ ಮನೆಗೆ ಕೆಲಸಕ್ಕೆ ಹೋಗಿದ್ದರೆನ್ನಲಾಗಿದೆ. ಮಧ್ಯಾಹ್ನ ಊಟ ಮುಗಿಸಿ ಎಲಿಮಲೆ ಬಳಿಯ ಪರ್ಲಡಿ ನಾರಾಯಣ ಎಂಬವರ ಮನೆಯ ಬಳಿಯಿದ್ದ ಒಂದೆರಡು ತೆಂಗಿನ ಮರದಿಂದ ಊಟದ ಬಳಿಕ ಇದ್ದ ಸಮಯದಲ್ಲಿ ಬಂದು ತೆಂಗಿನ ಕಾಯಿ ತೆಗೆಯಲೆಂದು ಹತ್ತಿದ್ದರೆನ್ನಲಾಗಿದೆ.
ತೆಂಗಿನ ಕಾಯಿಯ ಗೊನೆ ಕಡಿಯುತ್ತಿದ್ದಂತೆ ಅವರು ಅಕಸ್ಮಾತ್ ಆಗಿ ತೆಂಗಿನ ಮರದಿಂದ ಬಿದ್ದರೆಂದೂ, ಈ ಸಂದರ್ಭ ಅವರು ಗಂಭೀರ ಗಾಯಗೊಂಡರೆಂದೂ ತಿಳಿದು ಬಂದಿದೆ. ತಕ್ಷಣ ಅಲ್ಲಿದ್ದವರು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋದರೆಂದೂ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರಸ್ತೆ ಮಧ್ಯೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.ಮೃತರು ಅವಿವಾಹಿತರಾಗಿದ್ದು, ತಾಯಿ ಮತ್ತು ಸಹೋದರ
ಗಣೇಶ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.
ತಂದೆ ಸಹೋದರ ಸೇರಿದಂತೆ ಒಂದೇ ಮನೆಯ ಮೂವರು ತೆಂಗಿನ ಮರದಿಂದಲೇ ಬಿದ್ದು ಸಾವು….!
ಸತೀಶ ಮಣಿಯಾಣಿ ಯವರ ತಂದೆ ಮತ್ತು ಓರ್ವ ಸಹೋದರ ದಿ|ಸತ್ಯನಾರಾಯಣ ಎಂಬವರು ತೆಂಗಿನ ಮರದಿಂದಲೇ ಬಿದ್ದು ಮೃತಪಟ್ಟಿದ್ದು, ಇದೀಗ ಅವರ ಇನ್ನೋರ್ವ ಪುತ್ರ ಸತೀಶ ಕೂಡಾ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿರುವುದು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಸತೀಶ ಮಣಿಯಾಣಿಯವರಿಗೆ ಮರ ಹತ್ತದಂತೆ ಜ್ಯೋತಿಷ್ಯರು, ಮನೆಯ ಹಿರಿಯರೂ ಎಚ್ಚರಿಕೆಯನ್ನು ನೀಡಿದ್ದರು, ಎಂದೂ ತೆಂಗಿನ ಮರ ಏರದ ಇವರು ಪ್ರಥಮವಾಗಿ ಮರ ಏರಿದ್ದರು ಎಂದು ಹೇಳಲಾಗಿದೆ.