ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ “ಕೂವಂ ಅಳಕ್ಕಲ್ ” ಕಾರ್ಯಕ್ರಮ.

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ “ಕೂವಂ ಅಳಕ್ಕಲ್ ” ಕಾರ್ಯಕ್ರಮ.

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ದೈವಸ್ಥಾನದಲ್ಲಿ ಮಾ.೩ ರಿಂದ ಮಾ.೫ ರ ವರೆಗೆ ನಡೆಯುವ ದೈವಕಟ್ಟು ಮಹೋತ್ಸವದ ಅಂಗವಾಗಿ ಫೆ.೧೦ ರಂದು ಬೆಳಿಗ್ಗೆ ಧಾನ್ಯ ಅಳೆಯುವುದು (ಕೂವಂ ಅಳಕ್ಕಲ್ ) ಮತ್ತು ವೀಳ್ಯ ಕೊಡುವ ( ಅಡಯಾಳಂ ಕೊಡುಕ್ಕಲ್) ಕಾರ್ಯಕ್ರಮ ನಡೆಯಿತು,

ಈ ಸಂದರ್ಭದಲ್ಲಿ ದೈವಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಹೊನ್ನಪ್ಪವ ಕೊಳಂಗಾಯ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ದೈವಕಟ್ಟು ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿತೇಂದ್ರ ನಿಡ್ಯಮಲೆ, ದೈವಕಟ್ಟು ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ,ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕುಂಞಿಕಣ್ಣ ಬೇಡಗ, ಆಡಳಿತ ಸಮಿತಿ ಕಾರ್ಯದರ್ಶಿ ವಿಶ್ವನಾಥ ಮಜಿಕೋಡಿ, ಲೋಕೇಶ್ ಹೊದ್ದೆಟ್ಟಿ, ಆರ್ಥಿಕ ಸಮಿತಿ ಅದ್ಯಕ್ಷ ನಾಗೇಶ ಕುಂದಲ್ಪಾಡಿ ,ಕಾರ್ಯಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಶ್ರೀಜಿತ್ ಅರಂತೋಡು, ಸಂಘಟನಾ ಕಾರ್ಯದರ್ಶಿ ಉದಯಚಂದ್ರ ಕುಂಬಳಚೇರಿ,ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಸ್ಥಾನಿಕರು, ಸ್ಥಾನದ ಮನೆಯ ಅರ್ಚಕ ಕುಂಞಿಕಣ್ಣ ಸೇರಿದಂತೆ, ಗ್ರಾಮ ಸಮಿತಿ ಪದಾಧಿಕಾರಿಗಳು,ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು,

ರಾಜ್ಯ