ಸುಳ್ಯದಲ್ಲಿ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಹಾಗೂ ವಿದ್ಯುತ್ ಲೈನ್ ಕಾಮಗಾರಿಗೆ ಶಂಕುಸ್ಥಾಪನೆ.

ಸುಳ್ಯದಲ್ಲಿ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಹಾಗೂ ವಿದ್ಯುತ್ ಲೈನ್ ಕಾಮಗಾರಿಗೆ ಶಂಕುಸ್ಥಾಪನೆ.

ಈ ಸರಕಾರ ಪೂರ್ಣ ಅಗುವುದರೊಳಗೆ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ಮಂಜೂರಾತಿ ಮಾಡಿ ಗುದ್ದಲಿ ಪೂಜೆ ನೆರವೇರಿಸಿದ್ದೇವೆ. ಒಂದು ವರ್ಷದೊಳಗೆ 110 ಕೆ ವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಇಂಧನ ಸಚಿವ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ


ಅವರು ಜ.10 ರಂದು ಸುಳ್ಯದಲ್ಲಿ ನಡೆದ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಹಾಗೂ ವಿದ್ಯುತ್ ಲೈನ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಅರಣ್ಯ ಇಲಾಖೆಯ ಅಡೆತಡೆ ನಿವಾರಿಸಿ 9 ಕೋಟಿ ಪರಿಹಾರ ನೀಡಿದ್ದೇವೆ.110 ಕೆ ವಿ ಯೋಜನೆ ಆಗಲು ಸಚಿವ ಅಂಗಾರ ನಿರಂತರ ಪ್ರಯತ್ನ ಇತ್ತು,ಈ ಜಿಲ್ಲೆಯವರು ಅರಣ್ಯ ಸಚಿವರಾಗಿದ್ದಾಗಲೂ ಈ ಸಮಸ್ಯೆ ಪರಿಹಾರ ಕಂಡಿರಲಿಲ್ಲ, ಆದರೆ ಟೀಕೆಗಳನ್ನು ನಮ್ಮ ಮೇಲೆ ಮಾಡುತ್ತಿದ್ದರು ಎಂದರಲ್ಲದೆ ,ಇಲಾಖೆಯ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮುಂದುವರೆಯುತ್ತಿದೆ. ಜಿಲ್ಲೆಯಲ್ಲಿ 11 ಕಡೆ 110 ಕೆ.ವಿ.ಸ್ಟೇಷನ್ ಗಳಿಗೆ ಮಂಜೂರಾತಿ ನೀಡಿದ್ದೇವೆ.

ಸುಳ್ಯದ ರಾಜಾರಾಂಪುರ,ಚಾರ್ವಾಕ,ಜಾಲ್ಲೂರು ಹಾಗೂ ನಿಂತಿಕಲ್ಲಿನಲ್ಲಿ 33 ಕೆ.ವಿ.ಸಬ್ ಸ್ಟೇಷನ್ ಮಾಡಿತ್ತೇವೆ ,
ಬೆಳಕು ಯೋಜನೆಯ ವತಿಯಿಂದ ಸರಕಾರಿ ಜಾಗದಲ್ಲಿ
ನೆಲೆಸಿದ, ಪಂಚಾಯತ್ ಎನ್.ಓ.ಸಿ. ನೀಡದೇ ಬಾಕಿ
ಉಳಿದಿರುವ ಮನೆಗಳಿಗೆ ವಿದ್ಯುತ್ ನೀಡಿದ್ದೇವೆ. ಈ
ಯೋಜನೆಯಿಂದ ದ.ಕ.ಜಿಲ್ಲೆಯಲ್ಲಿ 6600 ಜನರಿಗೆ,
ತಾಲೂಕಿನಲ್ಲಿ 535 ಜನರಿಗೆ ವಿದ್ಯುತ್ ಸಂಪರ್ಕ
ನೀಡಿದ್ದೇವೆ. ರಾಜ್ಯಾದ್ಯಂತ ನಮ್ಮ ಅವಧಿಯಲ್ಲಿ 200 ಕಡೆ ಸಬ್ ಸ್ಟೇಷನ್ ಗಳಿಗೆ ಮಂಜೂರಾತಿ ನೀಡಿದ್ದೇವೆ ಇದೀಗ ಇಲ್ಲಿ ಗುದ್ಧಲಿ ಪೂಜೆ ನೆರವೇರಿಸಿದ್ದೇವೆ ಮುಂದಿನ ಬಾರೀ ನಮ್ಮದೇ ಸರಕಾರ ಬರುತ್ತದೆ ಇದರ ಉದ್ಘಾಟನೆಯನ್ನೂ ನಾವೇ ಮಾಡುತ್ತೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಎಸ್. ಅಂಗಾರ 2007 ರಲ್ಲಿ ಮಂಜೂರಾದ 110 ಕೆ.ವಿ.ಸಬ್ ಸ್ಟೇಷನ್ ಗೆ ಮಂಜೂರಾತಿ ಸಿಕ್ಕಿದರೂ ಆರಣ್ಯ ಇಲಾಖೆಯ ತಡೆಯಿಂದ ವಿಳಂಬವಾಯಿತು.
ಪ್ರಾರಂಭದಲ್ಲಿ 20 ಕೋಟಿ ಇದ್ದ ಬಜೆಟ್ ಈಗ 46
ಕೋಟಿಗೇರಿದೆ.ಜನರ ಒತ್ತಡದ ಮಧ್ಯೆಯೂ ಹಲವಾರು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ್ದರಿಂದ ಇಂದು
ಬೇಡಿಕೆ ಈಡೇರಿದೆ, ೧೧೦ ಕೆ ವಿ ವಿದ್ಯುತ್ ಯೋಜನೆಗೆ ಸಾಕಷ್ಟು ಅಪಪ್ರಚಾರ ಮಾಡಲಾಗಿತ್ತು, ಕೋರೋನಾ ಸಂದರ್ಭದಲ್ಲಿ ಅಪ್ರಚಾರ ಮಾಡಲಾಗಿತ್ತು, ಎಲ್ಲದಕ್ಕೂ ಸರಕಾರ ಅಭಿವೃದ್ದಿ ಕೆಲಸಮಾಡುವುದರ ಮೂಲಕ ಉತ್ತರ ಕೊಟ್ಟಿದೆ.ಅರಣ್ಯ ಅಧಿಕಾರಿಗಳ ಸಭೆ ನಡೆಸುವುದರ ಮೂಲಕ ಅರಣ್ಯದಿಂದ ಇದ್ದ ತೊಡಕುಗಳನ್ನು ನಿವಾರಿಸಿ ಇಂದು ಕಾಮಗಾರಿಗೆ ಶಂಕುಸ್ಥಾಪನೆಯಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್ ಸಿಂಹ ಮಾತನಾಡಿ ಮೋದಿಯವರ ಗಟ್ಟಿತನದ ನಿರ್ಧಾರಗಳಿಂದ ದೇಶ ಸಾಕಷ್ಟು ಅಭಿವೃದ್ದಿಯಾಗಲು ಕಾರಣವಾಗಿದೆ. ಜನರ ಭಾಗವಹಿಸುವಿಕೆಯಲ್ಲಿ ಅಭಿವೃದ್ದಿ ಸಾದ್ಯ ಸರಕಾರವನ್ನು ಜನಪ್ರತಿನಿಧಿಗಳನ್ನು ಎಚ್ಚರಿಸಿದಾಗ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಲು ಸಾದ್ಯವಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧ ನಿಗಮದ ಎ.ವಿ.ತೀರ್ಥರಾಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ ಕಂದಡ್ಕ,ನ.ಪಂ.ಉಪಾಧ್ಯಕ್ಷೆ ಸರೋಜಿನಿ ಪೆಲ್ಲಡ್ಕ, ನ.ಪಂ.ಸದಸ್ಯೆ ಶೀಲಾಅರುಣ್ ಕುರುಂಜಿ, ಮೆಸ್ಕಾಂ ನಿರ್ದೇಶಕ ಮಂಜಪ್ಪ, ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಮಂಜುನಾಥ ಶ್ಯಾನುಭೋಗ್, ತಹಶೀಲ್ದಾರ್ ಕು.ಅನಿತಾಲಕ್ಷ್ಮೀ, ಕೆಪಿಟಿಸಿಎಲ್ ನ ಅಧಿಕಾರಿಗಳಾದ ಪುಷ್ಪಾ, ಕೃಷ್ಣರಾಜ್, ಉಮೇಶ್ ಉಪಸ್ಥಿತರಿದ್ದರು. ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್ ಸ್ವಾಗತಿಸಿ, ಕೆಪಿಟಿಸಿಎಲ್ ನ ಕಾರ್ಯನಿರ್ವಾಹಕ
ಇಂಜಿನಿಯರ್ ಗಂಗಾಧರ ಕೆ. ವಂದಿಸಿದರು. ಬಿಜೆಪಿ
ಮಂಡಲ ಪ್ರ.ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ
ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ