
ಸುಳ್ಯ:ಸಚಿವ ಎಸ್.ಅಂಗಾರ ಅವರ ವಿಶೇಷ ಪ್ರಯತ್ನದಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರ ಪಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ 5ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ನಗರ ಪಂಚಾಯತ್ ಅದ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಮತ್ತು ಇನ್ನಿತರ ಅಭಿವೃದ್ಧಿ ಕೆಲಸಗಳು ನಡೆಯಲಿದ್ದು ಡಿ.9 ರಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್ ಅವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ.ನಗರ ಪಂಚಾಯತ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶೇಷ ಅನುದಾನ 5 ಕೋಟಿ ಬಿಡುಗಡೆಯಾಗಿದ್ದು 2ಕೋಟಿ 80 ಲಕ್ಷ ಮೊತ್ತದ ಕಾಮಗಾರಿಗೆ ಟೆಂಡರ್ ಪೂರ್ತಿಗೊಂಡಿದ್ದು ಡಿ.9 ರಂದು ಚಾಲನೆ ನೀಡಲಾಗುವುದು. ಉಳಿದ 2.20 ಕೋಟಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯಲಿದ್ದು ಕ್ರಿಯಾ ಯೋಜನೆ ರೂಪಿಸಲಾಗಿದೆ. ಅಲ್ಲದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸುಳ್ಯ ನಗರದ ಕುಡಿಯುವ ನೀರಿನ ಯೋಜನೆಗೆ 17 ಕೋಟಿ ಮೊತ್ತದ ವೆಂಟೆಡ್ ಡ್ಯಾಮ್ ಮಂಜೂರಾಗಿದ್ದು ಕಾಮಗಾರಿಗೆ ಅಂದು ಚಾಲನೆ ನೀಡಲಾಗುವುದು. ಆರೋಗ್ಯ ಇಲಾಖೆಯಲ್ಲಿ 4 ಕೋಟಿಗೂ ಮಿಕ್ಕಿ ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ವಿನಯಕುಮಾರ್ ಕಂದಡ್ಕ ತಿಳಿಸಿದರು



.ಅಭಿವೃದ್ಧಿಯಾಗುವ ರಸ್ತೆಗಳು:
ಸುಳ್ಯ ನಗರ ವ್ಯಾಪ್ತಿಯ ಕೊರಂಬಡ್ಕ- ನಾರಾಜೆ ಪ.ಜಾತಿ ಕಾಲನಿ ಸಂಪರ್ಕ ರಸ್ತೆ ಅಭಿವೃದ್ಧಿ,ಶಾಂತಿನಗರ ಬಾಣರಗುಡ್ಡೆ -ಕುದ್ಪಾಜೆ-ದುಗಲಡ್ಕ-ನೀರಬಿದಿರೆ ಪ.ಜಾತಿ ಕಾಲನಿಗಳ ರಸ್ತೆ ಅಭಿವೃದ್ಧಿ. ಬೂಡು ಪ.ಜಾತಿ ಕಾಲನಿ- ನಾವೂರು ಕಾಲನಿ ಸಂಪರ್ಕ ರಸ್ತೆ, ಸೂರ್ತಿಲ ಆಶ್ರಯ ಕಾಲನಿಯ ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿ. ಪರಿವಾರಕಾನ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿ, ಕುರುಂಜಿ- ಭಸ್ಮಡ್ಕ ಪರಿಶಿಷ್ಟ ಪಂಗಡದ ಹಾಗೂ ಕುಕ್ಕಾಜೆಕಾನ ಪರಿಶಿಷ್ಟ ಪಂಗಡ ಹಾಗೂ ಕುಕ್ಕಾಜೆ ಕಾನ ಪರಿಶಿಷ್ಟ ಪಂಗಡದವ ಮನೆ ಕಡೆಯ ರಸ್ತೆ ಅಭಿವೃದ್ಧಿ.ಬೆಟ್ಟಂಪಾಡಿ ಆಶ್ರಯ ಕಾಲನಿ,ಸೂರ್ತಿಲ,ಕೊರಂಬಡ್ಕ ಅಶ್ರಯ ಕಾಲನಿ ಅಡ್ಡ ರಸ್ತೆಗಳ ಹಾಗೂ ಕೊಡಿಯಾಲಬೈಲ್ ಬ್ರಹ್ಮರಗಯ ರಸ್ತೆ ಚರಂಡಿ ಅಭಿವೃದ್ಧಿ.ದುಗಲಡ್ಕ ಕೊಯಿಕುಳಿ ಶಾಲಾ ರಸ್ತೆ ಅಭಿವೃದ್ಧಿ.ದಕ್ಷಿಣ ಬೀರಮಂಗಿಲ ಹಾಗೂ ಜಟ್ಟಿಪಳ್ಳ ಕಾನತ್ತಿಲ ರಸ್ತೆ ಅಭಿವೃದ್ಧಿ. ಕೇರ್ಪಳ ಭಗವತಿ ದೇವಸ್ಥಾನ ದ್ವಾರದಿಂದ ಕೇರ್ಪಳ ಕಟ್ಟೆಯ ಕಡೆಗೆ ರಸ್ತೆ ಅಭಿವೃದ್ಧಿ. ಕೆರೆಮೂಲೆಯಿಂದ ಬೂಡು ನೂತನ ಸಂಪರ್ಕ ರಸ್ತೆ ಅಭಿವೃದ್ಧಿ.ಗಾಂಧಿನಗರ ಶಾಲಾ ಹಿಂಬದಿಯ ಬಲಗಡೆ ರಸ್ತೆ ,ಕಾಯರ್ತೋಡಿ ನಡುಮುಟ್ಲು ರಸ್ತೆ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹಿಂಭಾಗದ ರಸ್ತೆ ಮತ್ತು ಕನಿಕರಪಳ್ಳದಿಂದ ಕೋಡಿ ಕುಶಾಲಪ್ಪರ ಮನೆ ಕಡೆ ರಸ್ತೆ,ತಾಲೂಕು ಪಂಚಾಯತ್ ಕಛೇರಿ ಹಿಂಭಾಗದ ರಸ್ತೆ ಮತ್ತು ಅಂಬಟಡ್ಕ ವೆಂಕಟರಮಣ ದೇವಸ್ಥಾನ ಮುಂಭಾಗದ ರಸ್ತೆ,ಕೆ ಹೆಚ್ ಬಿ ಕಾಲನಿಯ ಒಂದು ಮತ್ತು ಎರಡನೇ ರಸ್ತೆ ,ಜಯನಗರ ಶಾಲಾ ಬದಿಯ ರಸ್ತೆ ಅಭಿವೃದ್ಧಿ.ಆಯುರ್ವೇದ ಕಾಲೇಜಿನಿಂದ ವಿವೇಕಾನಂದ ವೃತದ ಕಡೆಗೆ ಹಾಗೂ ವಿವೇಕಾನಂದ ವೃತದಿಂದ ಕಾಂತಮಂಗಲ ರಸ್ತೆ ಬದಿ ಅಂಬಟಡ್ಕ ದೇವಸ್ಯ ರಸ್ತೆ ಬದಿ ಮತ್ತು ಎಸ್ ವಿ ಯಂ ಅಸ್ಪತ್ರೆ ಹಿಂಭಾಗಕ್ಕೆ ಹರಿಯುವ ಮಳೆ ನೀರು ಚರಂಡಿ ಅಭಿವೃದ್ಧಿ ಹಾಗೂ ಮೋರಿ ರಚನೆ ಕಾಮಗಾರಿ ಕೆಲಸಗಳು ನಡೆಯಲಿದೆ ಎಂದು ವಿವರಿಸಿದರು.
ಅರೋಗ್ಯ ಇಲಾಖೆ ವತಿಯಿಂದ ಸುಸಜ್ಜಿತ ಶವಗಾರ,ಆಕ್ಸಿಜನ್ ಘಟಕ, ಅತ್ಯಾಧುನಿಕ ಲ್ಯಾಬ್,ಅಸ್ಪತ್ರೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಅವರು ವಿವರಿಸಿದರು.

ಕೊಡಿಯಾಲಬೈಲು-ದುಗಲಡ್ಕ ರಸ್ತೆಗೆ 50 ಲಕ್ಷ ಹೆಚ್ಚುವರಿ ಅನುದಾನ ಬಿಡುಗಡೆ:
ಕೊಡಿಯಾಲಬೈಲು -ದುಗಲಡ್ಕ ರಸ್ತೆ 50 ಲಕ್ಷ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಶಾಸಕರ ವಿಶೇಷ ಅನುದಾನದಿಂದ ಹೆಚ್ಚುವರಿ 50 ಲಕ್ಷ ಬಿಡುಗಡೆಯಾಗಿದೆ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಸುಳ್ಯ ನಗರದ ವಿವಿಧ ವಾರ್ಡ್ ಗಳಲ್ಲಿ ಶಾಸಕರ ವಿಶೇಷ ಅನುದಾನದಿಂದ ಬಿಡುಗಡೆಯಾದ ಮೂರು ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ ಅದರಲ್ಲಿ ಒಂದು ರಸ್ತೆಯ ಕಾಮಗಾರಿ ಬಾಕಿ ಉಳಿದಿದೆ ಅದನ್ನು ಅತೀ ಶ್ರೀಘ್ರದಲ್ಲಿ ಮಾಡಿ ಮುಗಿಸಲಿದ್ದೇವೆ.700 ಮೀಟರ್ ಕಾಂಕ್ರೀಟೀಕರಣ ಆಗಿದೆ. ಮತ್ತೆ 700 ಮೀಟರ್ ಕಾಂಕ್ರೀಟೀಕರಣ ನಡೆಯಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ,ಸ್ಥಾಯಿ ಸಮಿತಿ ಅಧ್ಯಕ್ಷ ಶೀಲಾವತಿ ಅರುಣಾ ಕುರುಂಜಿ,ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಉಪಸ್ಥಿತರಿದ್ದರು
