
“ಆಮ್ ಆದ್ಮಿ ಪಕ್ಷವನ್ನು 10 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಈ 10 ವರ್ಷಗಳಲ್ಲಿ, ಸಾರ್ವಜನಿಕರ ಅಪಾರ ಪ್ರೀತಿ ಮತ್ತು ಕಾರ್ಯಕರ್ತರ ಶ್ರಮದಿಂದ, ಪಕ್ಷವು ಭಾರತೀಯ ರಾಜಕೀಯದಲ್ಲಿ ಅನೇಕ ಇತಿಹಾಸಗಳನ್ನು ಸೃಷ್ಟಿಸಿದೆ” ಎಂದು ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಪಕ್ಷ ಹತ್ತು ವರುಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಎಎಪಿಯ ದಕ್ಷಿಣ ಕನ್ನಡ ಘಟಕವು ಕಸಬಾ ಬೆಂಗ್ರೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಹತ್ತು ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಿತು. ದಕ್ಷಿಣ ಕನ್ನಡ ಘಟಕದ ಅಧ್ಯಕ್ಷ ಶ್ರೀ ಸಂತೋಷ್ ಕಾಮತ್ ಅವರು ಕೇಕ್ ಕತ್ತರಿಸಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಹಾದಿಯನ್ನು ಅನುಸರಿಸುವಂತೆ ಸದಸ್ಯರು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.ಬಜಪೆ, ಮೂಡುಬಿದಿರೆ, ಉಳ್ಳಾಲ, ಸುರತ್ಕಲ್, ಸುಳ್ಯದಲ್ಲಿಯೂ ಆಮ್ ಆದ್ಮಿ ಪಕ್ಷದ ಸ್ಥಳೀಯ ಘಟಕಗಳ ವತಿಯಿಂದ ಕೇಕ್ ಕಟಿಂಗ್ ಮತ್ತಿತರ ಕಾರ್ಯಕ್ರಮಗಳು ನಡೆದವು.
ಎಎಪಿ ದ.ಕ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಝ್ಫರ್ ರಜಾಕ್, ಜೈದೇವ್ ಕಾಮತ್, ಜೇಮ್ಸ್ ಡಿಸಾ, ಅಬ್ದುಲ್ ಲತೀಫ್, ಗ್ಲಾವಿನ್ ಡಿಸೋಜಾ, ಬೆನೆಟ್ ಮೊರಾಸ್, ರೋನಿ ಕ್ರಾಸ್ತಾ, ಗ್ರೇಸಿ ಮಾರ್ಟಿಸ್, ಹಬೀಬ್ ಖಾದರ್, ಹಮೀದ್, ನಜೀರ್ ಅಹಮದ್, ಫಿರೋಜ್ ಅಹಮದ್ ಉಲ್ಲಾಲ್, ಪ್ರಥ್ವಿ, ಡೆಸ್ಮಂಡ್, ಅರುಣ್ ಡಿಸೋಜ ಉಪಸ್ಥಿತರಿದ್ದರು.


