ಪುತ್ತೂರು : ಪದವಿ ಪೂರ್ವ ಶಿಕ್ಷಣ ಇಲಾಖೆ
ವತಿಯಿಂದ ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ
ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ
ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ
ವಿಭಾಗದ ನಿಶ್ಚಲ್ ಕೆ.ಜೆ ನಾಲ್ಕನೇ ಸ್ಥಾನ ಪಡೆದು
ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ
ನಡೆಸುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ
ಆಯ್ಕೆ ಆಗಿದ್ದಾರೆ. ಈತನು ಪುತ್ತೂರಿನ
ನೆಹರೂನಗರದ ಪಿಎಮ್ಜಿಎಸ್ವೈ ಇಂಜಿನಿಯರ್
ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ.ಇವರು ಮೂಲತಃ ಮಡಿಕೇರಿ ತಾಲೋಕಿನ ಪೆರಾಜೆ ಗ್ರಾಮದ ಕರಿಂಬಿ ಮನೆಯವರು.
ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,
ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ
ವೃಂದ ಅಭಿನಂದಿಸಿದ್ದಾರೆ.


