ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ – ರಾಘವೇಶ್ವರ ಶ್ರೀ
ದೇಹದೊಳಗಿದೆ ಪಂಚಪ್ರಾಣಗಳು ನಡೆಸುವ ಅಡುಗೆಮನೆ! ತೇಗು ಬಂದಾಗ ಊಟ ನಿಲ್ಲಿಸದಿದ್ದರೆ ಮುಂದಿದೆ ಅಪಾಯ. ಅನ್ನ ಜೀರ್ಣವಾದಷ್ಟು ಸುಲಭವಲ್ಲ ಜೀರ್ಣಕ್ರಿಯೆಯ ಗುಟ್ಟು! ಗೋಕರ್ಣ: ವರ್ಣಮಾಲೆಯಲ್ಲಿ ಮಹಾಪ್ರಾಣ ಅಕ್ಷರಗಳನ್ನು ಸಮರ್ಪಕವಾಗಿ ಉಚ್ಚರಿಸುವುದರಿಂದ ದೇಹದಲ್ಲಿ ಅಗ್ನಿ ಜಾಗೃತಿ ಉಂಟಾಗುತ್ತದೆ. ಮಹಾಪ್ರಾಣವನ್ನು ಉಚ್ಚರಿಸುವಾಗ ನಾಭಿಸ್ಥಾನದಲ್ಲಿ ಒತ್ತಡ ಉಂಟಾಗುವುದರಿಂದ ಅಗ್ನಿಯ ಬಲವೃದ್ಧಿಯಾಗುತ್ತದೆ. ಅಕ್ಷರಗಳನ್ನು ಸಮರ್ಪಕವಾಗಿ ಉಚ್ಚರಿಸುವುದರಿಂದ…










