ಬನ್ನೇರುಘಟ್ಟದಲ್ಲಿ ಹಾವು ಕಚ್ಚಿ ಸಾಫ್ಟ್‌ವೇರ್ ಉದ್ಯೋಗಿ ಸಾವು – ಸಾರ್ವಜನಿಕರೇ ಕ್ರಾಕ್ಸ್ ಚಪ್ಪಲಿ ಧರಿಸುವ ಮುನ್ನ ಎಚ್ಚರ

ಬನ್ನೇರುಘಟ್ಟದಲ್ಲಿ ಹಾವು ಕಚ್ಚಿ ಸಾಫ್ಟ್‌ವೇರ್ ಉದ್ಯೋಗಿ ಸಾವು – ಸಾರ್ವಜನಿಕರೇ ಕ್ರಾಕ್ಸ್ ಚಪ್ಪಲಿ ಧರಿಸುವ ಮುನ್ನ ಎಚ್ಚರ

ಬನ್ನೇರುಘಟ್ಟದಲ್ಲಿ ನಡೆದ ದುರ್ಘಟನೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಮಂಜು ಪ್ರಕಾಶ್ (34) ಹಾವು ಕಚ್ಚಿದ ಪರಿಣಾಮ ದುರ್ಮರಣ ಹೊಂದಿದ್ದಾರೆ.

ಮಂಜು ಪ್ರಕಾಶ್ ಕ್ರಾಕ್ಸ್ ಚಪ್ಪಲಿ ಹಾಕಿಕೊಂಡು ಪೇಟೆಗೆ ಹೋಗಿ, ಮನೆಗೆ ಮರಳಿ ಬಂದು ಕೊಠಡಿಯಲ್ಲಿ ಮಲಗಿದ್ದರು. ಸ್ವಲ್ಪ ಸಮಯದ ನಂತರ ಆ ಚಪ್ಪಲಿಯೊಳಗೆ ಹಾವು ಸೇರಿಕೊಂಡಿರುವುದನ್ನು ಕುಟುಂಬದವರು ಗಮನಿಸಿದರು. ತಕ್ಷಣವೇ ಕೊಠಡಿಗೆ ಹೋಗಿ ನೋಡಿದಾಗ, ಮಂಜು ಪ್ರಕಾಶ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದು ಕಂಡುಬಂತು.

ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಆರೋಗ್ಯ ಮತ್ತು ಸೌಂದರ್ಯ ರಾಜ್ಯ