ಅಹಮದಾಬಾದ್ , ಜೂನ್ 13:
ಅಹಮದಾಬಾದ್ನಲ್ಲಿ ಸಂಭವಿಸಿದ ಎರ್ ಇಂಡಿಯಾ ವಿಮಾನ ದುರಂತದ ನಂತರ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ದುರಂತದ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಲ್ಲಿನ ಸ್ಥಿತಿಗತಿಯನ್ನ ಪರಿಶೀಲಿಸಿದರು.





ಮೋದಿಜೀ ಅವರು ವಿಮಾನ ಅಪಘಾತದಿಂದ ಹಾನಿಗೊಳಗಾದವರ ಬಗ್ಗೆ ಕಳಕಳಿಯುಳ್ಳ ಮಾತುಗಳನ್ನಾಡಿದರು, ಪೀಡಿತರ ಕುಟುಂಬಗಳಿಗೆ ಶೀಘ್ರ ಸಹಾಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ದುರಂತದ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ತನಿಖೆಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.