
ಮಂಗಳೂರು: ರಾಜ್ಯದಲ್ಲಿನ ಹಿಂಗಾರು ಮಳೆ ಎಫೆಕ್ಟ್ಗೆ ತರಕಾರಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಹೈರಾಣಾಗಿದ್ದಾರೆ.

ಇನ್ನು ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದ ಹಿನ್ನೆಲೆ ಹಾಗೂ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ನಷ್ಟವಾದ ಹಿನ್ನೆಲೆ 9 ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆಯಾಗಿದೆ.
ದೈನಂದಿನ ಅಡುಗೆಗೆ ಬೇಕಾದ ಈರುಳ್ಳಿ, ಆಲುಗೆಡ್ಡೆ, ಟೊಮಾಟೊ ದರಗಳ ಏರಿಕೆಯಿಂದ ಗ್ರಾಹಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಳ್ಳುಳ್ಳಿ ಕೆಜಿಯೊಂದಕ್ಕೆ 320 ರೂ. ಇಂದ 440 ರೂ. ದರ ಏರಿಕೆ ಆಗಿದ್ದು, ಈರುಳ್ಳಿ ದರ 80ರ ಆಸುಪಾಸಿನಲ್ಲಿದೆ. ತರಕಾರಿ ದರ ಇನ್ನೂ ಹೆಚ್ಚುವ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ.
ಯಾವ ತರಕಾರಿ ದರ ಎಷ್ಟಾಗಿದೆ?ದಪ್ಪ ಈರುಳ್ಳಿ: 58 – 79 ರೂ.ಸಾಂಬಾರ್ ಈರುಳ್ಳಿ: 60 – 85 ರೂ.ಟೊಮಾಟೊ: 60- 85 ರೂ.ಹಸಿ ಮೆಣಸಿನಕಾಯಿ: 50 – 70 ರೂ.ಬೀಟ್ರೂಟ್: 45 – 60 ರೂ.ಆಲುಗೆಡ್ಡೆ: 50 – 70 ರೂ.ಕ್ಯಾಪ್ಸಿಕಮ್: 50 – 65 ರೂ.ಹಾಗಲಕಾಯಿ: 45- 65 ರೂ.ಬೀನ್ಸ್: 60 – 80 ರೂ.ಡಬಲ್ ಬೀನ್ಸ್: 65 – 90 ರೂ.ಕ್ಯಾಬೇಜ್: 35- 50 ರೂ.ಸೌತೆಕಾಯಿ: 45 – 55 ರೂ.ಬದನೆಕಾಯಿ: 40 – 55 ರೂ.ಸುವರ್ಣಗೆಡ್ಡೆ: 50 – 70 ರೂ.ಶುಂಠಿ: 75- 100 ರೂ.ಬೆಂಡೆಕಾಯಿ: 35- 50 ರೂ.ಕ್ಯಾರೆಟ್: 50- 65 ರೂ.
