ಮಂಗಳೂರು: ಮಳೆಗೆ ಧರೆಗುರುಳಿದ ಮರ-ಎರಡು ವಾಹನಗಳಿಗೆ ಹಾನಿ

ಮಂಗಳೂರು: ಮಳೆಗೆ ಧರೆಗುರುಳಿದ ಮರ-ಎರಡು ವಾಹನಗಳಿಗೆ ಹಾನಿ

ಮಂಗಳೂರು, ಮೇ 22: ನಗರದ ಕರಂಗಲ್ಪಾಡಿ ಕೋರ್ಟ್ ರಸ್ತೆಯ  ದಾರಿಯಲ್ಲಿ  ನಿನ್ನೆ ಸುರಿದ ಮಳೆಗೆ ಬೃಹತ್ ಗಾತ್ರ ದ ಮರ ಬಿದ್ದು ವಾಹನಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ.

ನಿನ್ನೆ ರಾತ್ರಿ 9.30ರ ಹೊತ್ತಿಗೆ ಸುರಿದ ಮಳೆಗೆ ನಗರ  ಕರಂಗಲ್ಪಾಡಿ  ರಾಧ ಮೆಡಿಕಲ್ ನ‌ ಮುಂಭಾಗದ ಕೋರ್ಟ್ ರಸ್ತೆಯ  ದಾರಿಯಲ್ಲಿ  ಮರ ಬಿದ್ದಿದೆ, ಘಟನೆಯಲ್ಲಿ ಎರಡು ವಾಹನಗಳು ಜಖಂ ಗೊಂಡಿದೆ.

ಘಟನಾ ಸ್ಥಳಕ್ಕೆ ಪೂರ್ವ ವಿಭಾಗದ ಹೊಯ್ಸಳ ಪೋಲಿಸರು ಹಾಗು ಮೆಸ್ಕಾಂ ಸಿಬ್ಬಂದಿಗಳು ಬಂದು ಮರ ತೆರವುಗೊಳಿಸಿದರು

ರಾಜ್ಯ